ನಾಯಕನಹಟ್ಟಿ ಶ್ರೀ.ಗುರುತಿಪ್ಪೇರುದ್ರ ಸ್ವಾಮಿ ಜಾತ್ರೆ ಮಹೋತ್ಸವ  200 ಹೆಚ್ಚುವರಿ ಬಸ್ ಸೇವೆ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಮಾ.13: ನಾಯಕನಹಟ್ಟಿ  ಶ್ರೀ.ಗುರುತಿಪ್ಪೇರುದ್ರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.25 ರಿಂದ 27 ರವರೆಗೆ  ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ಪಾವಗಡ ಘಟಕಗಳಿಂದ ಒಟ್ಟು 200 ಜಾತ್ರಾ ವಿಶೇಷ  ಬಸ್‌ಗಳು ಕಾರ್ಯಚರಣೆ ನಡೆಸಲಿವೆ.
ಚಿತ್ರದುರ್ಗದಿಂದ ನಾಯಕನಹಟ್ಟಿ ತೆರಳುವ ಬಸ್‌ಗಳು ಬೆಳಗಟ್ಟ, ಹಾಯ್ಕಲ್ ಚಳ್ಳೆಕರೆ ಮಾರ್ಗವಾಗಿ, ಚಳ್ಳಕೆರೆ ನಾಯಕನಹಟ್ಟಿ ಬಸ್‌ಗಳು ನರ‍್ಲಗುಂಟೆ ಮಾರ್ಗವಾಗಿ, ಹಿರಿಯೂರು ನಾಯಕನಹಟ್ಟಿ ಬಸ್‌ಗಳು ಸಾಣಿಕೆರೆ, ಚಳ್ಳಕೆರೆ, ನರ‍್ಲಗುಂಟೆ ಮಾರ್ಗವಾಗಿ ಹಾಗೂ ನಾಯಕಹಟ್ಟಿ ಪರುಶುರಾಂಪುರ ಬಸ್‌ಗಳು ಚಳ್ಳಕೆರೆ ಮಾರ್ಗವಾಗಿ ಸಂಚರಿಸಲಿವೆ.  ಭಕ್ತಾಧಿಗಳು ಸದುಪಯೋಗ ಪಡೆದುಕೊಳ್ಳುವಂತೆ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

 

ಇದನ್ನೂ ಓದಿ: ಬಿಜೆಪಿ 20 ಅಭ್ಯರ್ಥಿಗಳ ಪಟ್ಟಿ ರಿಲೀಸ್, ಚಿತ್ರದುರ್ಗ ಇನ್ನೂ ಸಸ್ಪೆನ್ಸ್?

[t4b-ticker]

You May Also Like

More From Author

+ There are no comments

Add yours