ಚಿತ್ರದುರ್ಗ: ನಗರದ ಭೋವಿ ಗುರುಪೀಠದಲ್ಲಿ ಹರಿಹರದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ವಾಲ್ಮೀಕಿ ಮಹಸ್ವಾಮಿಗಳನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶಾಸಕರಿಗೆ ಕಂಕಣ ಧಾರಣೆ ಮಾಡಿದರು. ವಾಲ್ಮೀಕಿ ಶ್ರಿ ಗಳು ಮಾತನಾಡಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ನಮ್ಮ ಮಠದ ಪರಮ ಭಕ್ತರಾಗಿದ್ದಾರೆ. ನಮ್ಮ ಸಮಾಜದ ಜೊತೆ ಸಾದ ನಿಂತಿದ್ದಾರೆ. ಅವರು ಮೀಸಲಾತಿ ಹೋರಟದ ಸಮಯದಲ್ಲಿ ಬೆಂಗಳೂರು ಫ್ರೀಡಂ ಪಾರ್ಕಗೆ ಆಗಮಿಸಿ ಬೆಂಬಲ ಸೂಚಿಸಿದ ಮೊದಲ ರಾಜಕಾರಣಿ ಆಗಿದ್ದಾರೆ ಎಂದರು. ಮೀಸಲಾತಿಯಿಂದ ಸಮಾಜದ ಯುವಕ ಯುವತಿಯರಿಗೆ ಉದ್ಯೋಗ ಮತ್ತು ವಿಧ್ಯಭ್ಯಾಸಕ್ಕೆ ಸಹಕಾರಿಯಾಗಿದೆ ಎಂದರು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ನಮ್ಮ ಸಮಾಜದ ಮೇಲೆ ವಿಶೇಷ ಪ್ರೀತಿ ಇದೆ. ನಮ್ಮ ಸಮಾಜದ ಜೊತೆ ಸದಾ ಇದ್ದು ಅವರಿಗೆ ಒಳ್ಳೆಯದಾಗಲಿ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಮತ್ತು ನೂರಾರು ವಾಲ್ಮೀಕಿ ಯುವಕರು ಇದ್ದರು.
+ There are no comments
Add yours