ಶಾಸಕರಾದ ಟಿ.ರಘುಮೂರ್ತಿ ಮತ್ತು ಬಿ.ಜಿ.ಗೋವಿಂದಪ್ಪಗೆ ಒಲಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಇಬ್ಬರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಲಿದಿದೆ.  ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರಿಗೆ  ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ ಮತ್ತು ಹೊಸದುರ್ಗ ಕ್ಷೇತ್ರದ ಶಾಸಕರಾದ ಬಿ.ಜಿ.ಗೋವಿಂದಪ್ಪ ಅವರಿಗೆ ಆಹಾರ ಮತ್ತು ನಾಗರಿಕ ರಬರಾಜು ನಿಗಮದ ಅಧ್ಯಕ್ಷ ಸ್ಥಾನ ಒಲಿದಿದೆ. ಆದರೆ ವಿಪರ್ಯಾಸವೆಂದರೆ ಈ ಇಬ್ಬರು ಶಾಸಕರು ಸಹ ನಿಗಮ‌ ಮಂಡಳಿ ಸ್ಥಾನ ಬೇಡ ಎಂದು ಸಿಎಂ ಅವರಿಗೆ ಬಹಿರಂಗವಾಗಿ ಹೇಳಿದ್ದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಿಎಂ ಮತ್ತು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಆಗಿರುವ ಡಿಕೆಶಿ ಅವರಿಗೆ ಪತ್ರ ಬರೆಯುವ ಮೂಲಕ ನಿಗಮ‌ ಮಂಡಳಿ ಬೇಡ ಎಂದು ನಯವಾಗಿ ತಿರಸ್ಕರಿಸಿದ್ದರು. 

ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಸಕರು ಸರ್ಕಾರ ಮತ್ತು ಸಿಎಂ ಅವರ ಒತ್ತಡಕ್ಕೆ ಮಣಿಯುತ್ತಾರಾ ಅಥವಾ  ಮೊದಲೇ ತಿಳಿಸಿದಂತೆ ಹುದ್ದೆ ಅಲಂಕರಿಸದೇ ಶಾಸಕರಾಗಿ ಮುಂದುವರೆಯುತ್ತಾರಾ ಎಂದು ಶಾಸಕರು ಸ್ವಯಂ  ನಿರ್ಧಾರ ಮಾಡುವ ತನಕ ಕಾದು ನೋಡಬೇಕಿದೆ.

ಇದನ್ನೂ ಓದಿ: 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಫೈನಲ್

 

[t4b-ticker]

You May Also Like

More From Author

+ There are no comments

Add yours