ತುಮಕೂರು: ರಾಜ್ಯದಲ್ಲಿ ಡಿಸೆಂಬರ್ ಅಂತ್ಯದೊಳಗೆ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಪತ್ತಿನ ಸಹಕಾರ ಸಂಘ ಪ್ರಾರಂಭಿಸುವುದಾಗಿ ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ. ಈ ಮೂಲಕ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಮಾತನಾಡಿದಂತ ಅವರು, ಸಹಕಾರಿ ಕ್ಷೇತ್ರವು ಜನಪರ ಆಂದೋಲನ ಮಾಡುತ್ತಿದೆ.
ಶಾಸಕ ಸ್ಥಾನಕ್ಕಿಂತ ಸಹಕಾರಿ ಸ್ಥಾನವೇ ಮುಖ್ಯವಾಗಿದೆ ಎಂದರು.
ಗದುಗಿನ ಎಸ್ ಎಸ್ ಪಾಟೀಲ್ ಅವರು 1904ರಲ್ಲಿ ಪ್ರಾರಂಭ ಮಾಡಿದ ಈ ಸಹಕಾರ ಕ್ಷೇತ್ರ, ಈಗ ಶಕ್ತಿಯುತವಾಗಿದೆ. ರೈತರು ಕೃಷಿಯೊಂದಿಗೆ ಹೈನುಗಾರಿಕೆಯಂತಹ ಉಪ ಕಸುಬನ್ನು ರೂಢಿ ಮಾಡಿಕೊಳ್ಳುವ ಮೂಲಕ ಆರ್ಥಿಕ ಪ್ರಗತಿ ಕಾಣಬೇಕಾಗಿದೆ ಎಂದು ತಿಳಿಸಿದರು.
[t4b-ticker]
+ There are no comments
Add yours