ವಿಕಲಚೇತನರಿಗೆ ಸಾಧನ ಸಲಕರಣೆ ಉಚಿತವಾಗಿ ಒದಗಿಸಲು ವೈದ್ಯಕೀಯ ತಪಾಸಣಾ ಶಿಬಿರ ಆಯೋಜನೆ

 

ಚಿತ್ರದುರ್ಗ(ಕರ್ನಾಟಕ ವಾರ್ತೆ):
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ವೈದ್ಯಕೀಯ ತಪಾಸಣಾ ಶಿಬಿರವನ್ನು ಇದೇ ಜುಲೈ 17 ರಿಂದ 22 ರವರೆಗೆ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರ ನಿರ್ದೇಶನದಂತೆ  ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಆಡಿಪ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ವಿವಿಧ ರೀತಿಯ ವಿಕಲಚೇತನರುಗಳಿಗೆ ಅವರುಗಳ ಅಗತ್ಯತೆಗನುಸಾರ ಅವಶ್ಯವಿರುವ ಅಂದರೆ ದೈಹಿಕ ವಿಕಲಚೇತನರಿಗೆ ಟ್ರೈಸೈಕಲ್, ಗಾಲಿ ಕುರ್ಚಿ, ಊರುಗೋಲು, ಕಂಕಳುದೊಣ್ಣೆ, ಆಗ್ಜಿಲರಿ ಕ್ಲಚ್ಚರ್ಸ್,  ಅಡ್ಜಸ್ಟಬಲ್ ವಾಕಿಂಗ್ ಸ್ಟಿಕ್, ರೊಲೇಟರ್, ಕೃತಕ ಕಾಲು, ಕೃತಕ ಪಾದ, ಕ್ಯಾಲಿಫರ್, ಸೆರಬ್ರಲ್ ಪಾಲ್ಸಿ ಮತ್ತು ಭೌದ್ದಿಕ ವಿಕಲತೆಯುಳ್ಳ ವಿಕಲಚೇತನರಿಗೆ ಸಿ.ಪಿ ವೀಲ್‍ಚೇರ್, ವೀಲ್‍ಚೇರ್, ಹಾಗೂ ಶೇ.100ರಷ್ಟು ದೃಷ್ಠಿದೋಷವುಳ್ಳವರಿಗೆ ಬ್ರೈಲ್‍ಸ್ಲೇಟ್, ಬ್ರೈಲ್‍ಕಿಟ್, ಬ್ರೈಲ್ ಕೇನ್ ಪೋಡ್ಲಿಂಗ್, ಸ್ಮಾರ್ಟ್‍ಕೇನ್, ಸ್ಮಾರ್ಟ್‍ಫೋನ್, ಹಾಗೂ ಶ್ರವಣದೋಷವುಳ್ಳವರಿಗೆ ಶ್ರವಣ ಸಾಧನ,  ಕುಷ್ಟರೋಗದಿಂದ ಗುಣಮುಖರಾದ ವಿಕಲಚೇತನರಿಗೆ  ಎಡಿಎಲ್ ಕಿಟ್, ಸೆಲ್ ಫೋನ್ ಮುಂತಾದ ಸಾಧನ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಲಿಮ್ಕೋ (ಆಕ್ಸಿಲರಿ ಪ್ರೊಡಕ್ಷನ್ ಸೆಂಟರ್) ಅಲಿಂಕೋ, ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ವಿಕಲಚೇತನರಿಗೆ ಹಮ್ಮಿಕೊಂಡಿದ್ದು, ದೈಹಿಕ, ಶೇ.100ರಷ್ಟು ದೃಷ್ಠಿದೋಷವುಳ್ಳ, ಶ್ರವಣದೋಷವುಳ್ಳ, ಕುಷ್ಟರೋಗದಿಂದ ಗುಣಮುಖರಾದ ವಿಕಲಚೇತನರು ವೈದ್ಯಕೀಯ ತಪಾಸಣಾ ಶಿಬರಕ್ಕೆ ಹಾಜರಾಗಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಶಿಬಿರ ಜರುಗಲಿರುವ ದಿನಾಂಕ ಮತ್ತು ಸ್ಥಳ: ಇದೇ ಜುಲೈ 17 ರಂದು ಬೆಳಿಗ್ಗೆ 10 ಗಂಟೆಗೆ ಮೊಳಕಾಲ್ಮೂರಿನ ಕ್ಷೇತ್ರ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಜುಲೈ 18 ರಂದು ಬೆಳಿಗ್ಗೆ 10 ಗಂಟೆಗೆ ಚಿತ್ರದುರ್ಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿ.ಪಿ.ಎಸ್) ಗುರುಭವನ ಮುಂಭಾಗ, ಜುಲೈ 19 ರಂದು ಬೆಳಿಗ್ಗೆ 10 ಗಂಟೆಗೆ ಹಿರಿಯೂರಿನ ಬಿ.ಆರ್.ಸಿ ಕೇಂದ್ರ., ಜುಲೈ 20ರಂದು ಬೆಳಿಗ್ಗೆ 10 ಗಂಟೆಗೆ ಚಳ್ಳಕೆರೆಯ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ. ಜುಲೈ 21ರಂದು ಬೆಳಿಗ್ಗೆ 10 ಗಂಟೆಗೆ ಹೊಳಲ್ಕೆರೆಯ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆ (ಹೈಟೆಕ್), ಜುಲೈ 22ರಂದು ಬೆಳಿಗ್ಗೆ 10 ಗಂಟೆಗೆ ಹೊಸದುರ್ಗದ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ (ಅಶೋಕ ರಂಗಮಂದಿರ)ದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಅವಶ್ಯವಿರುವ ದಾಖಲಾತಿಗಳು: ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ ಕಾರ್ಡ್), ವೈದ್ಯಕೀಯ ಪ್ರಮಾಣ ಪತ್ರದ ಜೆರಾಕ್ಸ್, ಬಿ.ಪಿ.ಎಲ್ ಕಾರ್ಡ್/ಆದಾಯ ಪ್ರಮಾಣ ಪತ್ರ/ಎಂ.ಜಿ.ಎನ್.ಆರ್.ಇ.ಜಿ ನರೇಗಾ ಕಾರ್ಡ್/ಅಂಗವಿಕಲರ ಪಿಂಚಣಿ ಅದೇಶ ಪ್ರತಿ ಜೆರಾಕ್ಸ್, ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ, ಎರಡು ಭಾವಚಿತ್ರದೊಂದಿಗೆ ಶಿಬಿರದಲ್ಲಿ ಹಾಜರಿರಬೇಕು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾ ಬಾಲಭವನ ಆವರಣ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ ದೂರವಾಣಿ            ಸಂಖ್ಯೆ 08194-235284ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪಿ.ಲೋಕೇಶ್ವರಪ್ಪ ತಿಳಿಸಿದ್ದಾರೆ.
=======

[t4b-ticker]

You May Also Like

More From Author

+ There are no comments

Add yours