ಚಳ್ಳಕೆರೆ ನಗರದಲ್ಲಿ ಶಾಸಕ ಟಿ.ರಘುಮೂರ್ತಿ ಪ್ರಚಾರಕ್ಕೆ ಭರ್ಜರಿ ಜನಬೆಂಬಲ

 

ಚಳ್ಳಕೆರೆ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿಮ್ಮ ಒಂದು ಮತ ಸಾಕು ಎಂಬಂತೆ ಚಳ್ಳಕೆರೆ ನಗರದಲ್ಲಿ  ಚಳ್ಳಕೆರೆ ಕ್ಷೇತ್ರದ ಹಾಲಿ ಶಾಸಕ ಟಿ.ರಘುಮೂರ್ತಿ ಅವರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ  ನಗರದಲ್ಲಿ ಪ್ರಚಾರ ನಡೆಸುತ್ತಿದ್ದು   ಇಂದು ಇಂದಿರಾ ನಗರದ ವಾರ್ಡ್ ನಂ. 19 ರಲ್ಲಿ ಚುನಾವಣಾ  ಈ ಸಂದರ್ಭದಲ್ಲಿ ನ್ಯೂಸ್ 19 ಕನ್ನಡ ಜೊತೆ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಗ್ಯಾರಂಟಿ ಇದ್ದು  ಬಡವರ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಮನವಿ ಮಾಡಿದ್ದು ಮನೆ ಮಗನಂತೆ ಎಲ್ಲಾರೂ ಪ್ರೀತಿ ತೋರುತ್ತಿದ್ದು  ನನಗೆ ಅತ್ಯಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದರು.(#challakerecongress)

ಚಳ್ಳಕೆರೆಯನ್ನು ನಮ್ಮ ಸರ್ಕಾರದಲ್ಲಿ ಶಿಕ್ಷಣ, ಮೂಲಭೂತ ಸೌಲಭ್ಯಗಳನ್ನು ಒದಗಿಸಿ ದೂರದೃಷ್ಟಿಯಿಂದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಎದುರಾಳಿಗಳು ಯಾರೇ ಇರಲಿ ನನಗೆ ಜನರು ಸುಪ್ರೀಂ . ಜನರು ನನ್ನ ಪರವಾಗಿದ್ದು ಚಳ್ಳಕೆರೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು ಮತ್ತು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

#challakere #INCKarnataka #Congress #CongressParty #congressguarantee

[t4b-ticker]

You May Also Like

More From Author

+ There are no comments

Add yours