ರಾಯಚೂರು : ಭಾರತದ ತಂತ್ರಜ್ಞಾನದ ಇತಿಹಾಸದಲ್ಲಿ ಇಂದು ಮರೆಯಲಾರದ ದಿನ ಎಂದು ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಭಿನಂದನೆ ಸಲ್ಲಿಸಿದರು.
ಚಂದ್ರಯಾನ 3 ಈಗಷ್ಟೇ ಲ್ಯಾಂಡ್ ಆಗಿರೋದು ಅತ್ಯಂತ ಹೆಮ್ಮೆಯ ವಿಷಯ, ಈಗಾಗಲೇ ನಮ್ಮ ಪ್ರಾಚೀನ ಭಾರತ ಇತಿಹಾಸದಲ್ಲಿ ವೇದ,ಪುರಾಣಗಳಲ್ಲಿ ಖುಷಿ ಮುನಿಗಳು ತಂತ್ರಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ, ಎಲ್ಲದರ ಶ್ರೀಮಂತಿಕೆ ನಮ್ಮ ದೇಶದ್ದಾಗಿದೆ ಎಂದರು.
ಇಂದು ನಮ್ಮ ಇಸ್ರೋ ಸಂಸ್ಥೆ ವಿಜ್ಞಾನಿಗಳು, ಬಹು ಪರಿಶ್ರಮದಿಂದ ರೂಪಿಸಿರೋ ಚಂದ್ರಯಾನ 3 ಯಶಸ್ವಿಯಾಗಿದೆ.. ಇದು ಅಭಿನಂದನಾ ವಿಷಯ, ಭಗವಂತನ ಅನುಗೃಹ,ಹರಿ ಗುರುಗಳ ವಿಶೇಷ ಕೃಪೆ,ವಿಜ್ಞಾನಿಗಳ ಪರಿಶ್ರಮ,ನಮ್ಮ ಭಾರತ ಸರ್ಕಾರದ ಪ್ರೋತ್ಸಾಹ ಎಲ್ಲ ಜನರ ಶುಭ ಹಾರೈಕೆ ಹಿನ್ನೆಲೆ..ಚಂದ್ರಯಾನ 3 ಯಶಸ್ಸು ಕಂಡಿದೆ.. ಇದನ್ನು ತುಂಬಾ ಅಭಿನಂದಿಸುತ್ತೇನೆ, ಈ ರೀತಿ ಹತ್ತು ಹಲವು ಸಂಶೋಧನೆಗಳು ನಮ್ಮ ದೇಶದ ವಿಜ್ಞಾನಿಗಳಿಂದ ಮೂಡಿ ಬರಲಿ..ನಮ್ಮ ದೇಶದ ಕೀರ್ತಿ ಪತಾಕೆ ಬೆಳಗಲಿ ಎಂದು ಹಾರೈಸಿದರು.
+ There are no comments
Add yours