ಮೊಳಕಾಲ್ಮುರು:ಮೊಳಕಾಲ್ಮುರು ಕ್ಷೇತ್ರದ ಸಚಿವ ಬಿ. ಶ್ರೀರಾಮುಲು ಕಡು ರಾಜಕೀಯ ವಿರೋಧಿ , ಬಿಜೆಪಿಯನ್ನು ಹಾದಿ ಬೀದಿಯಲ್ಲಿ ಬಾಯಿಗೆ ಬಂದಾ ಹಾಗೇ ಟಾಂಗ್ ನೀಡಿದ್ದ ಮತ್ತು ಇದರ ಜೊತಗೇ ರಾಮುಲು ಗೆ ಕಲ್ಲೇಟು ಮತ್ತು ಪೊರಕೆ ಪ್ರದರ್ಶನ ಮಾಡಿದ್ದನ್ನು ಮರೆತು ಬಿಜೆಪಿಗೆ ಅಭ್ಯರ್ಥಿಕೊರತೆಯಿಂದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಅವರನ್ನು ಮನವೊಲಿಸಿ ಕಾಂಗ್ರೆಸ್ ತೊರೆದು ಅಪಾರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಮಾಡಿಕೊಳ್ಳವಲ್ಲಿ ಯಶಸ್ವಿಯಾಗಿದೆ.
ಈ ಸಂದರ್ಭದಲ್ಲಿ ಸಾರಿಗೆ ಸಚಿವರಾದ ಬಿ.ಶ್ರೀರಾಮುಲು, ಚಿತ್ರದುರ್ಗ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ ,ಎಂಎಲ್ಸಿ ಕೆ.ಎಸ್.ನವೀನ್ , ಜಿಲ್ಲಾಧ್ಯಕ್ಷರಾದ ಎ.ಮುರುಳಿ ಅವರು, ನಾಯಕನಹಟ್ಟಿ ಮಂಡಲದ ಅಧ್ಯಕ್ಷರಾದ ಈ. ರಾಮರೆಡ್ಡಿ ಅವರು, ಮೊಳಕಾಲ್ಮುರು ಮಂಡಲದ ಅಧ್ಯಕ್ಷರಾದ ಡಾ ಪಿ. ಎಂ. ಮಂಜುನಾಥ್ ಅವರು, ಹಾಗು ಮುಖಂಡರು,ಪದಾಧಿಕಾರಿಗಳು, ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಉಪಸ್ಥಿತರಿದ್ದರು..
[t4b-ticker]
+ There are no comments
Add yours