ವೇದ ಚಿತ್ರದ ಪ್ರಚಾರಕ್ಕೆ ಆಗಮಿಸಿದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಗೆ ಅದ್ದೂರಿ ಸ್ವಾಗತ

 

ಚಳ್ಳಕೆರೆ: ನಗರದಲ್ಲಿ ಪ್ರದರ್ಶನಗೊಳ್ಳುತ್ತಿರುವ ವೇದ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಡಾ.ಶಿವರಾಜ್ ಕುಮಾರ್( Shivaraj Kumar)   ರವರನ್ನು ನಗರದ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ನಗರದ ಪುನಿತ್ ರಾಜಕುಮಾರ್ ವೃತ್ತಕ್ಜೆ ಆಗಮಿಸಿ ಅವರ ಭಾವಚಿತ್ರಕ್ಕೆ ಪುಪ್ಪಹಾರ ಹಾಕುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಉತ್ಸಾಹ ಹೆಚ್ಚಿಸಿದರು. ನಂತರ ತೆರೆದ ವಾಹನದ ಮೂಲಕ ಚಿತ್ರತಂಡದೊಂದಿಗೆ ಮೆರವಣಿಗೆ ಹೊರಟು ಅಂಬೇಡ್ಕರ್ ವೃತ್ತ, ನೆಹರೂ ವೃತ್ತದ ಮೂಲಕ‌ (mla Raghumurthy) ಚಿತ್ರಪ್ರದರ್ಶನವಾಗುತ್ತಿರುವ ರಾಮಕೃಷ್ಣ ಚಿತ್ರಮಂದಿರಕ್ಕೆ ತೆರಳಿದರು. ಕೆಲ ಹೊತ್ತು ಚಿತ್ರಮಂದಿರದ ಮಾಲೀಕರೊಂದಿಗೆ ಚರ್ಚೆ ನಡೆಸಿದರು. (Raghumurthy T)

ನಂತರ ಮಾತನಾಡಿದ ಡಾ.ಶಿವರಾಜ್ ಕುಮಾರ್, ಕನ್ನಡ ಚಿತ್ರಗಳನ್ನು ಹೆಚ್ಚು ಹೆಚ್ಚು ನೋಡಬೇಕು, ಕನ್ನಡ ಸಿನಿಮಾಗೆ ಪ್ರೋತ್ಸಾಹ ನೀಡಿ. ವೇದ ಚಿತ್ರ ತಮಿಳುನಾಡು, ಆಂಧ್ರಪ್ರದೇಶವೂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದರು.( challakere  )
ಚಿತ್ರನಟ ಡಾ.ಶಿವರಾಜ್ ಕುಮಾರ್ ನಗರಕ್ಕೆ ಆಗಮಿಸುತ್ತಿದ್ದಂತೆ ಶಾಸಕ ಟಿ.ರಘುಮೂರ್ತಿ ಭವ್ಯವಾಗಿ ಸ್ವಾಗತಿಸಿದರು.( vedha filam)

[t4b-ticker]

You May Also Like

More From Author

+ There are no comments

Add yours