ಕೈ ಬಿಟ್ಟು ಕಮಲ ಹಿಡಿಯುವ ಸಾಧ್ಯತೆಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್

 

ಧಾರವಾಡ : ಮಾಜಿ ಸಚಿವ ಸಂತೋಷ್ ಲಾಡ್ ಕೈ ಬಿಟ್ಟು ಬಿಜೆಪಿ ಸೇರೋದು ಬಹುತೇಕ ಫಿಕ್ಸ್ ಆಗಿದೆ. ಮಾಜಿ ಸಂತೋಷ್ ಲಾಡ್ ಕಲಘಟಗಿ ಕ್ಷೇತ್ರದ ಟಿಕೆಟ್ ಕೈ ತಪ್ಪುವ ಸುಳಿವು ಪಡೆದಿದ್ದು, ಕಲಘಟಗಿ ಕ್ಷೇತ್ರದಿಂದ ನಾಗರಾಜ್ ಚೆಬ್ಬಿ ಕೈ ಟಿಕೆಟ್ ನೀಡುವ ಸಾಧ್ಯತೆಯಿದೆ.

ಮಾಜಿ ಸಚಿವ ಸಂತೋಷ್ ಲಾಡ್ ನಿನ್ನೆ ಬೆಳಿಗ್ಗೆ ಶ್ರೀರಾಮುಲು ಭೇಟಿ ಮಡಿ ಮಾತುಕತೆ ನಡೆಸಿದ್ದಾರೆ. ನಿನ್ನೆ ಬೆಂಗಳೂರಿನ ರಹಸ್ಯ ಸ್ಥಳದಲ್ಲಿ ಶ್ರೀರಾಮುಲು ಮತ್ತು ಲಾಡ್ ಮೆಗಾ ಮೀಟಿಂಗ್ ಮಾಡಿದ್ದಾರೆ. ಮೀಟಿಂಗ್ ನಲ್ಲಿ ಸಂಡೂರ್ ತುಕಾರಾಂ ಬದಲಾವಣೆ ಮಾಡುವ ಕುರಿತು ಚರ್ಚೆ ಮಾಡಿದ್ದಾರೆ. ಕಲಘಟಗಿಯಲ್ಲಿ ಟಿಕೆಟ್ ಕೊಡಿಸುವಂತೆ ಸಂತೋಷ್ ಲಾಡ್ ಶ್ರೀರಾಮುಲುಗೆ ದುಂಬಾಲು ಬಿದಿದ್ದಾರೆ.ballarey news

ಎರಡು ಕ್ಷೇತ್ರಗಳಲ್ಲಿ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಗೆ ಮಾಜಿ ಸಚಿವರು ಮುಂದಾಗಿದ್ದಾರೆ. ಈಗಾಗಲೇ ಎಪಿಸಿಸಿ ಅಧ್ಯಕ್ಷ ಹಾಗೂ ಕೆಪಿಸಿಸಿ ಅಧ್ಯಕ್ಷರಿಂದ ನಾಗರಾಜ್ ಚೆಬ್ಬಿಗೆ ಟಿಕೆಟ್ ನೀಡಲು ಚಿಂತನೆ ಮಾಡಲಾಗಿದ್ದು ,ಬಳ್ಳಾರಿ ನಾಯಕರನ್ನು ಹಿಡಿದು ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಮಾಜಿ ಸಚಿವ ಸಂತೋಷ್ ಲಾಡ್ ಮುಂದ್ಧಾಗಿದ್ದಾರೆ.

[t4b-ticker]

You May Also Like

More From Author

+ There are no comments

Add yours