ನಿಂತಿದ್ದ ksrtc ಬಸ್ ಗೆ ಕಾರು ಡಿಕ್ಕಿ ಐದು ಜನ ಸಾವು

 

ಮಂಡ್ಯ: ರಸ್ತೆ ಪಕ್ಕ ನಿಂತಿದ್ದ ಕೆಎಸ್​ಆರ್​ಟಿಸಿ ಬಸ್​​ಗೆ (KSRTC Bus) ವೇಗವಾಗಿ ಬಂದ ಕಾರು (Car) ಹಿಂಬದಿಯಿಂದ ಡಿಕ್ಕಿಯೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಮಂಡ್ಯದ (Mandya) ನಾಗಮಂಗಲದ ಮೈ-ಬೆ ರಾಷ್ಟ್ರೀಯ ಹೆದ್ದಾರಿಯ ನಾಗಮಂಗಲದ (Nagamangala) ಬಳಿ ನಡೆದಿದೆ.

ಹಾಸನದ (Hassan) ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ ನಾಗಮಂಗಲದ ಬಿಜೆಎಸ್ ಆಸ್ಪತ್ರೆ  ಮುಂಭಾಗ ನಿಂತಿತ್ತು. ಇದನ್ನು ಗಮನಿಸದೇ ಕಾರು ಚಾಲಕ ವೇಗವಾಗಿ ಬಂತು ಬಸ್​ ಹಿಂಭಾಗಕ್ಕೆ ಡಿಕ್ಕಿಯೊಡೆದಿದ್ದಾನೆ.

ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. KA,02,MM 1802 ನಂಬರ್​​ ಸ್ವಿಫ್ಟ್ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬೆಳ್ಳೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನು ಬೆಂಗಳೂರಿನ ಬೆಂಡಿಗನಹಳ್ಳಿ ನಿವಾಸಿ ನಮಿತಾ, ರಾಜಸ್ಥಾನ ಮೂಲದ ಪಂಕಜ್ ಶರ್ಮಾ, ಬೆಂಗಳೂರಿನ ಹೊಸಕೋಟೆ ಮೂಲದ ವಂಶಿಕೃಷ್ಣ, ಧಾರವಾಡದ ರಘುನಾಥ್ ಭಜಂತ್ರಿ ಎಂದು ಗುರುತಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours