ಜಿಲ್ಲಾ ಜೆಡಿಎಸ್ ವತಿಯಿಂದ ಆಗಸ್ಟ್19 ಕ್ಕೆ ಬೃಹತ್ ಪ್ರತಿಭಟನೆ: ಡಿ.ಯಶೋಧರ

 

ಚಿತ್ರದುರ್ಗ: ರಾಜ್ಯ ಜೆಡಿಎಸ್ ಪಕ್ಷದ ನಿರ್ದೇಶನದ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಯ ವಿರುದ್ದ ಜಿಲ್ಲಾ ಜೆಡಿಎಸ್ ಆಶ್ರಯದಲ್ಲಿ ದಿನಾಂಕ:19-08-2020 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಯಂತ್ರಣ ಕಾಯ್ದೆ-1966,ಗುತ್ತಿಗೆ ಕಾರ್ಮಿಕರ ನಿಯಂತ್ರಣ ಮತ್ತು ನಿರ್ಮೂಲನೆ ಕಾಯ್ದೆ ಗಳಿಗೆ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ವಾಪಸ್ಸು ಪಡೆದು ರೈತ ಸಂಕುಲ ಮತ್ತು ಕಾರ್ಮಿಕರ ಹಿತ ಕಾಯಲು ಸರ್ಕಾರವನ್ನು ಆಗ್ರಹಿಸುವುದು, ಹಾಗೂ ಚಿತ್ರದುರ್ಗ ತಾಲೂಕು ತುರುವನೂರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ವಿರೋಧಿಸಿ ಬೃಹತ್ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರಯುಕ್ತ ನಮ್ಮ ಪಕ್ಷದ ಪದಾಧಿಕಾರಿಗಳು. ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಅಭಿಮಾನಿಗಳು ಸಕಾಲಕ್ಕೆ ಸರಿಯಾಗಿ ಚಿತ್ರದುರ್ಗದಲ್ಲಿರುವ ಜೆಡಿಎಸ್ ಕಚೇರಿಯ ಹತ್ತಿರ ಬರಬೇಕೆಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಡಿ. ಯಶೋಧರ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours