ವರದಿ:ತುಮಕೂರ್ಲಳ್ಳಿ ಗೋವಿಂದಪ್ಪ
ಮೊಳಕಾಲ್ಮುರು:ಸಕಾಲಕ್ಕೆ ಸರಿಯಾಗಿ ಮಳೆಯಾಗದೆ ತಾಲ್ಲೂಕಿನಾದ್ಯಂತ ಬರದ ಛಾಯೆ ಅವರಿಸಿದ್ದು ರೈತ ಸಮುದಾಯ ಸಂಕಷ್ಟದ ಸುಳಿಯಲ್ಲಿ ಜೀವನ ಸಾಗಿಸುವಂತಾಗಿದೆ ಇಂತಹ ವಿಷಮ ಪರಿಸ್ಥಿತಿಯಿಂದ ರೈತರ ಬದುಕಿಗೆ ಆಸರೆಯಾಗಲು ಮೊಳಕಾಲ್ಮುರು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಒತ್ತಾಯಿಸಿದರು
ಮೊಳಕಾಲ್ಮುರು ಪಟ್ಟಣದ ನುಂಕೆಮಲೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಅವರಣದಲ್ಲಿರುವ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ಹುತಾತ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗ್ರಹಿಸಿದರು
43ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನರಗುಂದ ಮತ್ತು ನವಲಗುಂದ ರೈತ ಚಳುವಳಿಯಲ್ಲಿ ಹುತಾತ್ಮರಾದ ರೈತರಿಗೆ ಮೌನಾಚರಣೆ ಆಚರಿಸಿ ರೈತಪರ ಬೇಡಿಕೆಗಳ ಹಕ್ಕೋತ್ತಾಯ ಮಂಡಿಸಿದರು
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಮತ್ತು ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ರೈತರಿಗೆ ಅನುವಾಗುವಂತಹ ನೀತಿಗಳನ್ನು ಮತ್ತು ಕಾಯ್ದೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಕೊಂಡಾಪುರ ಪರಮೇಶ್ ಮಾತನಾಡಿ ರೈತರು , ದಲಿತರು, ಕೂಲಿ ಕಾರ್ಮಿಕರು ತಾಲ್ಲೂಕಿನಾದ್ಯಂತ ಅವರಿಸಿರುವ ಬರಗಾಲದ ಛಾಯೆಯಿಂದ ಸಂಕಷ್ಟದ ಸುಳಿಯಲ್ಲಿ ಜೀವನ ಸಾಗಿಸುತ್ತಿದ್ದು ಮೊಳಕಾಲ್ಮುರು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು
ದಲಿತ ಸಂಘರ್ಷ ಸಮಿತಿಯ ಮುಖಂಡ ಯರಜ್ಜೆನಹಳ್ಳಿ ನಾಗರಾಜ ಮಾತನಾಡಿ ರೈತರು ಬರಗಾಲದ ಸಂಕಷ್ಟದ ಸುಳಿಗೆ ಸಿಲುಕಿದ್ದು ರೈತ ಸಮುದಾಯದ ಎಲ್ಲಾ ರೀತಿಯ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಬೇಕು ವಿಷಮ ಪರಿಸ್ಥಿತಿಯಲ್ಲಿ ಜೀವನ ನಡೆಸುವ ರೈತ ಸಮುದಾಯದ ಬದುಕಿಗೆ ಆಸರೆಯಾಗಬೇಕು ಎಂದು ಒತ್ತಾಹಿಸಿದರು
ಸಂದರ್ಭದಲ್ಲಿ : ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಕನಕ ಶಿವಮೂರ್ತಿ ಕೋನಸಾಗರ ಮಂಜಣ್ಣ ಸೂರಮ್ಮನಹಳ್ಳಿ ರಾಜಣ್ಣ ತಿಪ್ಪಿರಯ್ಯನಹಟ್ಟಿ ಚಂದ್ರಣ್ಣ ಕೃಷ್ಣಪ್ಪ ಪಿಟಿ ಹಟ್ಟಿ ನಿಂಗಣ್ಣ ನಾಗರಾಜ ಹನುಮಂತಪ್ಪ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು
[t4b-ticker]
+ There are no comments
Add yours