ವಿಶೇಷ ಚೇತನ ಯುವತಿ ದಾವಣಗೆರೆ ಎಸ್ಪಿ ಭಾಗ್ಯ, ಯುವತಿ ಆಸೆಗೆ ಜಿಲ್ಲಾ ಪೋಲಿಸ್ ಸಾಥ್ ?

 

ದಾವಣಗೆರೆ: ಜೀವನ ಒಮ್ಮೆಯಾದರೂ ಸಹ  ಖಾಕಿ ಡ್ರಸ್ ನಲ್ಲಿ  ಎಸ್ ಪಿ ಸೀಟ್ ಕುರ್ಚಿಯಲ್ಲಿ  ಕುಳಿತುಕೊಳ್ಳಬೇಕು ಎಂಬ ವಿಶೇಷ ಚೇತನ ಯುವತಿಯ ಆಸೆಯನ್ನು  ಜಿಲ್ಲಾ ಪೊಲೀಸ್​ ಇಲಾಖೆ ಈಡೇರಿಸಿದೆ. ಇದರಿಂದ ಆ ಯುವತಿ ಮತ್ತು ಕುಟುಂಬಸ್ಥರ ಸಂತೋಷದ ಕಟ್ಟೆ ಒಡೆದು‌ ಹೋಗಿ ಸಂಭ್ರಮಕ್ಕೆ ಪರವೇ  ಇರಲಿಲ್ಲ.

ನಗರದಲ್ಲಿ ಕಂಪ್ಯೂಟರ್ ಸೆಂಟರ್ ​​ ಅಂಗಡಿ ಇಟ್ಟುಕೊಂಡಿರುವ ಕೆಟಿಜೆ ನಗರ ನಿವಾಸಿ ವಿಜಯಲಕ್ಷ್ಮೀ ಎಂಬುವರ ಪುತ್ರಿ 18 ವರ್ಷದ ಸಾಧನಾ ಎಂ.ಪಾಟೀಲ್ ಅವರು  ಮಿದುಳು ವಾತ ಕಾಯಿಲೆಯಿಂದ ಬಳಲುತ್ತಿದ್ದು, ಓದಿನಲ್ಲಿ ಚುರುಕಾಗಿರುವ ಸಾಧನಾ, SSLC  ಪರೀಕ್ಷೆಯಲ್ಲಿ ಶೇ.76 ಅಂಕ ಗಳಿಸಿದ್ದು  ಬಾಲ್ಯದಿಂದಲೂ ಎಸ್​ಪಿ ಆಗಬೇಕು ಎಂಬ ಕನಸಿತ್ತು. ಆರೋಗ್ಯ ಸಮಸ್ಯೆಯಿಂದ ಇದು ಸಾಧ್ಯವಿಲ್ಲ. ಆದರೆ, ಮಗಳನ್ನು ಪೊಲೀಸ್​ ಅಧಿಕಾರಿಯ ವೇಷದಲ್ಲಿ ನೋಡಬೇಕು ಎಂಬ ಅಪೇಕ್ಷೆಯಿಂದ ವಿಜಯಲಕ್ಷ್ಮೀ ಅವರು  ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಆಸೆಯಲ್ಲಿ ಜಿಲ್ಲಾ ಪೊಲೀಸರು ಈಡೇರಿಸಿದ್ದಾರೆ.

ಪೊಲೀಸ್ ಡ್ರಸ್ ನಲ್ಲಿ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್​ ಅವರ ಪಕ್ಕದಲ್ಲಿ 45 ನಿಮಿಷ ಕಾಲ ಕೂರಲು ಅವಕಾಶ ಮಾಡಿಕೊಡಲಾಗಿತ್ತು. ಯುವತಿ ಧರಿಸಿದ್ದ ಡ್ರಸ್ ಮೇಲೆ ಸಾಧನಾ ಎಂ.ಪಾಟೀಲ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಾವಣಗೆರೆ ಎಂದು ಬರೆದ ನೇಮ್​ ಪ್ಲೇಟ್​ ಹಾಕಲಾಗಿತ್ತು. ಈ ದೃಶ್ಯವನ್ನು ತಾಯಿ ವಿಜಯಲಕ್ಷ್ಮೀ ಮತ್ತು ಕುಟುಂಬದವರು ನೋಡಿ ಸಂತೋಷ ಪಟ್ಟರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ ಇದ್ದರು.

[t4b-ticker]

You May Also Like

More From Author

+ There are no comments

Add yours