ಇಂದು ಕೋಟೆ ನಾಡಿಗೆ ರಾಹುಲ್ ಗಾಂಧಿ ಆಗಮನ.

 

 

 

 

ಚಿತ್ರದುರ್ಗ:ಜು:3:-  ಇಂದು ನಗರದ  ಮುರುಘಾಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 11ಗಂಟೆ ಸುಮಾರಿಗೆ ಶ್ರೀ ಮುರುಘಾಮಠಕ್ಕೆ ಆಗಮಿಸಲಿದ್ದಾರೆ. ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲಾ, ವೇಣುಗೋಪಾಲ್, ಶಾಸಕ ಟಿ.ರಘುಮೂರ್ತಿ  ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡಲಿದ್ದು  ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿ ವಿವಿಧ ಮಠಾಧೀಶರನ್ನು  ರಾಹುಲ್ ಗಾಂಧಿ ಭೇಟಿ ಮಾಡಲಿದ್ದಾರೆ. ಮುರುಘಾ ಮಠದಲ್ಲಿ ಮಾದ್ಯಮದವರಿಗೆ   ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದ್ದು  ಮುರುಘಾಮಠ ಭೇಟಿ ಬಳಿಕ‌ ದಾವಣಗೆರೆಗೆ ತೆರಳಲಿರುವ ರಾಹುಲ್‌ ಗಾಂಧಿ,
ದಾವಣಗೆರೆಯಲ್ಲಿ ಆಯೋಜಿಸಿರುವ  ಸಿದ್ದರಾಮೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ ಅವರ 75ನೇ ಜನ್ಮದಿನ, ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours