ಚಿತ್ರದುರ್ಗ(ಕರ್ನಾಟಕ ವಾರ್ತೆ) ಮೇ.25:
ಕೃಷಿ ಇಲಾಖೆಯ 2022-23ನೇ ಸಾಲಿನ ವಿವಿಧ ಯೋಜನೆ, ಕಾರ್ಯಕ್ರಮಗಳ ಸಮಗ್ರ ಅನುಷ್ಠಾನದಲ್ಲಿ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನಗಳಿಸಿ, ಪುರಸ್ಕಾರ ಪಡೆದಿದೆ.
ಬೆಂಗಳೂರಿನಲ್ಲಿ ಜರುಗಿದ 2023-24ನೇ ಸಾಲಿನ ರಾಜ್ಯಮಟ್ಟದ ಮುಂಗಾರು ಹಂಗಾಮಿನ ಕಾರ್ಯಾಗಾರದಲ್ಲಿ ಚಿತ್ರದುರ್ಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಅವರು ಈ ಪುರಸ್ಕಾರ ಸ್ವೀಕರಿಸಿದರು.
ಕೃಷಿ ಇಲಾಖೆ ಸಂಬಂಧದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ವರದಿಗಳ ಸಲ್ಲಿಕೆ, ಗುಣಮಟ್ಟ ನಿಯಂತ್ರಣ, ವಿಮಾ ಯೋಜನೆಗಳ ಅನುಷ್ಠಾನ, ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ಯೋಜನೆಗಳ ಸಮಗ್ರ ಅನುಷ್ಠಾನದಲ್ಲಿ ರಾಜ್ಯಮಟ್ಟದಲ್ಲಿ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ.
ಪುರಸ್ಕಾರವನ್ನು ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ ಅವರಿಂದ ಪುರಸ್ಕಾರ ವಿತರಿಸಲಾಯಿತು.
- ಸಚಿವ ಖಾತೆ ಹಂಚಿಕೆಯ ಫೈನಲ್ ಪಟ್ಟಿ ಇಲ್ಲಿದೆ.
- ಎಲ್ಲಾ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮೊದಲ ಆದ್ಯತೆ: ಶಾಸಕ ಟಿ.ರಘುಮೂರ್ತಿ
- ಪೂಜೆ ವಿಧಿ ವಿಧಾನಗಳೊಂದಿಗೆ ನೂತನ ಸಂಸತ್ ಭವನ ಲೋಕರ್ಪಣೆ
- 28 ರಿಂದ ಜೂನ್ 3 ರವರೆಗಿನ ರಾಶಿ ಭವಿಷ್ಯ ಹೇಗಿದೆ, ನಿಮ್ಮ ಭವಿಷ್ಯ ವಾರದ ಭವಿಷ್ಯ ಹೀಗಿದೆ.
- ನೂತನ ಸಚಿವರಿಗೆ ಖಾತೆ ಹಂಚಿಕೆ ಯಾರಿಗೆಯಾವ ಖಾತೆ ನೋಡಿ.
- ಮಹರ್ಷಿ ವಾಲ್ಮೀಕಿ ಹೆಸರಲ್ಲಿ ಸಚಿವರಾಗಿ ಬಿ.ನಾಗೇಂದ್ರ ಪ್ರಮಾಣ ವಚನ, ಜೀವನದ ಸಂಪೂರ್ಣ ಮಾಹಿತಿ ಇಲ್ಲಿದೆ.
- ಸಚಿವ ಡಿ.ಸುಧಾಕರ್ ಅವರ ರಾಜಕೀಯ ಹಿನ್ನಲೆ ಮತ್ತು ಜೀವನದ ಸಂಪೂರ್ಣ ಮಾಹಿತಿ ಇಲ್ಲಿದೆ.
- ಸಚಿವ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ನಾಯಕ,ಕುರುಬ ಜನಾಂಗಗಳಿಗೆ ಎಷ್ಟು ಸಚಿವ ಸ್ಥಾನ, ಇಲ್ಲಿದೆ ಮಾಹಿತಿ
- ಸಿದ್ದು ಡಿಕೆ ಟೀಂ ನೂತನ 24 ಸಚಿವರ ಅಧಿಕೃತ ಪಟ್ಟಿ ಬಿಡುಗಡೆ, 11.45 ಕ್ಕೆ ಪ್ರಮಾಣ ವಚನ
- ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಅಮೃತ ಆರೋಗ್ಯ ಅಭಿಯಾನದಡಿ ಆರೋಗ್ಯ ತಪಾಸಣೆ