ಚಿತ್ರದುರ್ಗ: ಸಮಾಜದಲ್ಲಿ ಎರಡು ರೀತಿಯ ಜನಗಳು ಇರುತ್ತಾರೆ. ಸಮಾಜಕೋಸ್ಕರ ಬದುಕುವವರು ಮತ್ತು ತಮಗೋಸ್ಕರವೇ ಬದುಕುವವರನ್ನು ಸಮಾಜ ಶಾಶ್ವತವಾಗಿ ಮರೆತು ಹೋಗುತ್ತದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ಹೆಗ್ಗೆರೆ ತಾಯಮ್ಮ ತಿಪ್ಪೇಸ್ವಾಮಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ಬೆಂಗಳೂರಿನ ಮಾರುತಿ ಮೆಡಿಕಲ್ ಮಹೇಂದ್ರ ಮನೋತ್ ಜೈನ್ ಇವರು 1500 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಇಲ್ಲಿ ಇರುವಂತಹ ವಿದ್ಯಾರ್ಥಿಗಳು ಉದ್ಯಮಿಗಳಾಗುತ್ತಿರೋ ಅಧಿಕಾರಿಗಳಾಗುತ್ತರೋ ಯಾರಿಗೆ ಗೊತ್ತು. ಇದರಲ್ಲಿ ಸಮಾಜ ಸೇವೆ ಮಾಡುವವರು ಯಾರು ಆಗುತ್ತಾರೊ ಗೊತ್ತಿಲ್ಲ, ಆದರೆ ಎಲ್ಲರೂ ಸಹ ಸಮಾಜಕ್ಕೋಸ್ಕರ ಬದುಕಬೇಕು. ನಿನಗೋಸ್ಕರ ನೀವು ಬದುಕಬೇಡಿ ಎಲ್ಲರೂ ಸನ್ಯಾಸಿಗಳು ಆಗಬೇಕಂತಲ್ಲ. ಸಂಸಾರಿಗಳಾಗಿಯೂ ಸಹ ಸಮಾಜವನ್ನು ಉದ್ಧಾರ ಮಾಡುವಂತಹ ನಮ್ಮ ತಾಲೂಕಿನಲ್ಲಿ ನಮ್ಮ ಶಾಸಕಕರಾದ ರಘುಮೂರ್ತಿಯವರು ಶಿಕ್ಷಣಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಶೈಕ್ಷಣಿಕ ಗುಣಮಟ್ಟದ ಪ್ರಗತಿಗಾಗಿ ಶಾಲೆಗಳಿಗೆ ಬೇಕಾಗುವಂತಹ ಅನುಕೂಲಗಳನ್ನು ಒದಗಿಸಿದ್ದಾರೆ. ಉತ್ತಮವಾದ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ.
ಶಾಸಕರ ಅಭಿಲಾಷೆಯಂತೆ ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು.
ಇನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳು ಸಹ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು ಅದರಂತೆ ಶಿಕ್ಷಕರು ಹಾಗೂ ಮಕ್ಕಳು ಸಹ ಬರುವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಇಡೀ ರಾಜ್ಯದಲ್ಲಿ ನಂಬರ್ ಒನ್ ಸ್ಥಾನ ಪಡೆಯಬೇಕು. ಶಿಕ್ಷಣದಲ್ಲಿ ಮಹತ್ವ ಹೆಜ್ಜೆ ಸಾಧಿಸಬೇಕು. ನಾವು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಈಗಿಂದಲೇ ಮುಂದಿನ ಫಲಿತಾಂಶಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಈಗಾಗಲೇ ಹಲವು ಶಾಲೆಗಳಿಗೆ ಭೇಟಿ ನೀಡಿ ಸ್ಮಾರ್ಟ್ ಕ್ಲಾಸ್ ಗೆ ವ್ಯವಸ್ಥೆ ಮಾಡಲಾಗಿದೆ ಈ ಶಾಲೆಗೂ ಸಹ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗುವುದು ಅದರಂತೆ ಈ ಹಿಂಭಾಗದ ಕಾಂಪೌಂಡ್ ಮೂರು ಅಡಿ ಎತ್ತರ ಮಾಡಿ ಕೊಡಲಾಗುವುದು ಎಂದರು.
ಬಿಇಓ ಸುರೇಶ್ ಮಾತನಾಡಿ ನಮ್ಮ ತಾಲೂಕಿನ ಶೈಕ್ಷಣಿಕ ಪ್ರಗತಿ ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಇಲ್ಲಿ ಇರುವಂತಹ ಶಿಕ್ಷಕರ ಶ್ರಮ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಈ ಹೆಗ್ಗೆರೆ ತಾಯಮ್ಮ ಸರ್ಕಾರಿ ಪ್ರೌಢಶಾಲೆ ತುಂಬಾ ಶಿಸ್ತಿನ ಶಾಲೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಮೂಡುತ್ತಿದೆ. ಬರುವ ದಿನಗಳಲ್ಲಿಯೂ ಸಹ ಉತ್ತಮ ಫಲಿತಾಂಶಕ್ಕಾಗಿ ನಿರೀಕ್ಷೆ ಅದರಂತೆ ತಾಲೂಕಿನ ಎಲ್ಲಾ ಶಿಕ್ಷಕರು ಸಹ ಶ್ರಮ ಪಡಬೇಕಾಗುತ್ತದೆ ಶಿಕ್ಷಣಕ್ಕೆ ನಮ್ಮ ಶಾಸಕರು ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ಅವರು ನಿರೀಕ್ಷೆಯಂತೆ ಬರುವ ದಿನಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ನಾವು ಪಡೆಯಬೇಕಿದೆ ಎಂದರು.
ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ರೆಡ್ಡಿ , ಹೆಗ್ಗೆರೆ ತಾಯಮ್ಮ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಾಧವರಾವ್, ಶಿಕ್ಷಕರಾದ ರಾಜಣ್ಣ ಸುರೇಶ್ ಪ್ರದೀಪ್ ಪ್ರಾಣೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ನಾಗರಾಜ್, ಸುಜಾತ ಜಮುನಾ, ಕುಸುಮತಿ, ವನಜಾಕ್ಷಿ ,ರಾಜಮ್ಮ ಹಾಗೂ ಶಾಲಾ ವಿದ್ಯಾರ್ಥಿನಿಯರು ಇದ್ದರು.
[t4b-ticker]
+ There are no comments
Add yours