ಬೆಸ್ಕಾಂ ನಿರ್ಲಕ್ಷ್ಯ ವಿದ್ಯತ್ ತಂತಿ ತಗುಲಿ ಯುವಕ ಸಾವು

 

 

 

 

ದೊಡ್ಡಬಳ್ಳಾಪುರ: ರಾಗಿ ಹೊಲದಲ್ಲಿ ಕಳೆನಾಶಕ ಒಡೆಯುವಾಗ ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತ  ಸ್ವರ್ಶಿಸಿ ಯುವಕ ಸಾವನ್ನಪ್ಪಿದ್ದಾನೆ.

ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊನ್ನಘಟ್ಟ ಗ್ರಾಮದ ಯುವಕ 34 ವರ್ಷದ ಜಗನ್ ಕುಮಾರ್ ಮೃತ ಯುವಕನಾಗಿದ್ದಾನೆ.

 

 

ರಾಗಿ ಬೆಳೆಯಲ್ಲಿ ವಿಪರೀತ ಕಳೆ ಬಂದಿದೆ ಎಂದು ಕಳೆ ನಾಶಕ ಸಿಂಪರಣೆ ಮಾಡಲು ರಾಗಿ ಹೊಲಕ್ಕೆ ಬಂದಿದ್ದಾರೆ. ಕಳೆ ನಾಶಕ ಸಿಂಪರಣೆ ಮಾಡುವಾಗ ಹೊಲದಲ್ಲಿ ಕೈಗೆಟುಕುವ ಎತ್ತರದಲ್ಲಿ 11 ಕೆ.ವಿ ವಿದ್ಯುತ್ ಲೈನ್ ಜಗನ್ ಕುಮಾರ್​ಗೆ ತಗುಲಿದೆ. ವಿದ್ಯುತ್ ತಗುಲಿ ಜಗನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೊಲದಲ್ಲಿ ಹಾದು ಹೋಗಿದ್ದ 11 ಕೆವಿ ವಿದ್ಯುತ್ ಲೈನ್ ಸರಿಪಡಿಸುವಂತೆ ಹಲವು ಬಾರಿ ಬೆಸ್ಕಾಂ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ಬೆಸ್ಕಾಂ ಇಲಾಖೆ ವಿದ್ಯುತ್ ಲೈನ್ ಸರಿಪಡಿಸದೆ ನಿರ್ಲಕ್ಷ್ಯತೆ ತೋರಿತು. ಬೆಸ್ಕಾಂನವರ ನಿರ್ಲಕ್ಷ್ಯತೆಯಿಂದ ಯುವಕನ ಸಾವಾಗಿದೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

[t4b-ticker]

You May Also Like

More From Author

+ There are no comments

Add yours