ಚಿತ್ರದುರ್ಗ:ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಸಾವು ಕಂಡಿರುವ ಘಟನೆ ಚಿತ್ರದುರ್ಗ ನಗರದ ಹೊರ ವಲಯದ ಕಮ್ಮಾ ರೆಡ್ಡಿ ಕಲ್ಯಾಣ ಮಂಟಪ ಮುಂಭಾಗ ಜರುಗಿದೆ.
ದ್ವಿಚಕ್ರ ವಾಹನಕ್ಕೆ ಕಾರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದ್ದು ಚಿತ್ರದುರ್ಗ ನಗರದ ಕೆಳಗೋಟೆ ಮೂಲದ ಬಸವರಾಜ್(೬೪), ಈರಜ್ಜನಹಟ್ಟಿಯ ನರಸಿಂಹ ಮೂರ್ತಿ(೬೪) ಮೃತರು ಎಂದು ತಿಳಿದು ಬಂದಿದೆ.ಕಾರು ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪಿಎಸ್ಐ ರಾಜು ಭೇಟಿ, ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
[t4b-ticker]
+ There are no comments
Add yours