ಚಿತ್ರದುರ್ಗ : ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ಸಮೀಪ ನಿನ್ನೆ ಗುರುವಾರ ತಡ ರಾತ್ರಿ ನಡೆದಿದೆ.
ಮೃತ ವ್ಯಕ್ತಿ ಶಿವಗಂಗಾ ಗ್ರಾಮದ 23 ವರ್ಷದ ಆಕಾಶ್ ಎಂದು ಗುರುತಿಸಲಾಗಿದೆ.
ಹೊಳಲ್ಕೆರೆ ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ನಿನ್ನೆ ತಡರಾತ್ರಿ 9ಗಂಟೆ ಸುಮಾರಿಗೆ ಮೃತ ಆಕಾಶ್, ಕಾರ್ತಿಕ್ ಹಾಗೂ ನಿತಿನ್ ಈ ಮೂರು ಜನರು ಎರಡು ಬೈಕುಗಳಲ್ಲಿ ಟಿ.ನುಲೇನೂರು ಗೇಟ್ ಸಮೀಪ ಇರುವ ಡಾಬಾಕ್ಕೆ ಊಟಕ್ಕೆ ತೆರಳುವಾಗ ಒಂದು ಬೈಕಿನಲ್ಲಿ ಆಕಾಶ್ ಹಾಗೂ ಮತ್ತೊಂದು ಬೈಕಿನಲ್ಲಿ ನಿತಿನ್ ಮತ್ತು ಕಾರ್ತಿಕ್ ಹೊರಟಿರುತ್ತಾರೆ. ಸುಮಾರು 9 ಗಂಟೆ ಸುಮಾರಿಗೆ ಚಿತ್ರಹಳ್ಳಿ ಗೇಟ್ ದಾಟಿ ಸ್ವಲ್ಪ ದೂರದ ರಸ್ತೆಯಲ್ಲಿ ಎರಡು ಬೈಕುಗಳಲ್ಲಿ ಹೋಗುವಾಗ ಎದುರುಗಡೆಯಿಂದ ಅಂದರೆ ಚಿತ್ರದುರ್ಗದ ಕಡೆಯಿಂದ ಬಂದ ಕಾರಿನ ಚಾಲಕನು ತನ್ನ ಕಾರನ್ನು ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಕಾರ್ತಿಕ್ ಬರುತ್ತಿದ್ದ ಮುಂಬಾಗದ ಸ್ವಲ್ಪ ದೂರದಲ್ಲಿ ಆಕಾಶನು ನಡೆಸಿಕೊಂಡು ಹೋಗುತ್ತಿದ್ದ ಬೈಕಿಗೆ ಕಾರಿನ ಚಾಲಕ ಡಿಕ್ಕಿ ಪಡಿಸಿ ತನ್ನ ಕಾರನ್ನು ಚಾಲಕನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ.
ಕಾರಿನ ಚಾಲಕನ ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲ. ಕಾರು ಡಿಕ್ಕಿ ಪಡಿಸಿದ ಪರಿಣಾಮ ಆಕಾಶನ ಬೈಕು ಸಮೇತ ರಸ್ತೆಗೆ ಬಿದ್ದಾಗ ಮತ್ತೊಂದು ಬೈಕ್ನಲ್ಲಿ ಬಂದಿದ್ದ ತನ್ನ ಸ್ನೇಹಿತರು ಕೆಳಗೆ ಇಳಿದು ನೋಡಿದಾಗ ಆಕಾಶನ ತಲೆಗೆ, ಬಲಗಾಲಿಗೆ, ಬಲಗೈಗೆ ಬಲವಾದ ಪೆಟ್ಟು ಬಿದ್ದು ರಕ್ತ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಕಾರು ಮತ್ತು ಬೈಕ್ ಎರಡು ಜಖಂ ಗೊಂಡಿರುತ್ತದೆ.
ಇನ್ನೂ ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[t4b-ticker]
+ There are no comments
Add yours