ನೇಗಿಲು ತರಲು ಹೋದ ವ್ಯಕ್ತಿಗೆ ಬೇಲಿ ಮೇಲಿನ ವಿದ್ಯುತ್ ತಂತಿ ತಗುಲಿ ಸ್ಥಳದಲೇ ಸಾವು

 

ಚಿತ್ರದುರ್ಗ: ನೇಗಿಲು ತರಲು ಹೋದ ವ್ಯಕ್ತಿಗೆ  ವಿದ್ಯುತ್  ತಂತಿ ತಗುಲಿ ಸ್ಥಳದಲೇ ಮೃತಪಟ್ಟ ಘಟನೆ ತಾಲೂಕಿನ ಈರಜ್ಜನಹಟ್ಟಿ  ಗ್ರಾಮದಲ್ಲಿ ನಡೆದಿದೆ.

ಮೃತನನ್ನು  ರಂಗನಾಥ್ ಎಂದು ಗುರುತಿಸಲಾಗಿದ್ದು ಈತ ಗುರುರಾಜ್ ಎಂಬುವವರ ತೋಟಕ್ಕೆ ನೇಗಿಲು ತರಲು ಇಂದು ಬೆಳಗ್ಗೆ  ಈ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇವರು ಪಂಪ್ ಸೆಟ್ ಗೆ ಎಳೆದಿದ್ದ  ವಿದ್ಯುತ್ ತಂತಿ ಹೊಲದ ಬೇಲಿ ಮೇಲೆ ಎಳೆದುಕೊಂಡಿದ್ದ ಎಂದು ತಿಳಿದಿದ್ದ ಬೇಲಿ ಮತ್ತು ತಂತಿಗೆ ಜೊತೆಯಲ್ಲಿ ಇದ್ದು  ನೇಗಿಲು ಹೊತ್ತು ಕೊಳ್ಳುವುದಕ್ಕಿಂತ ಮೊದಲು ಬದವಿನಲ್ಲಿ ತಂತಿ ಮುಟ್ಟಿದ್ದ ತಂತಿ ಉತ್ತಮವಾಗಿಲ್ಲದ ಕಾರಣ ಮಳೆ ಬಂದು ಕೆಸರಾಗಿತ್ತು. ಇದನ್ನು ಗಮನಿಸದೇ ಬದುವಿನಲ್ಲಿ ತಂತಿ ಮುಟ್ಟಿ ಸ್ಥಳದಲೇ  ಪೂರ್ಣ ವಿದ್ಯುತ ಅವರಿಸಿದೆ ಎಂದು ತಿಳಿದಿದೆ‌.  ಪಕ್ಕದಲ್ಲಿ ಎರಡು ಹಸುಗಳು ಸಹ ಇದ್ದವು ಸ್ವಲ್ಪ ದೂರ ಇದ್ದರಿಂದ ಏನು ಸಮಸ್ಯೆ ಆಗಿಲ್ಲ ಎಂದು ತಿಳಿದಿದೆ. ವಿದ್ಯುತ್ ಮಾರ್ಗ ಸಹ ಅನಧಿಕೃತವಾಗಿ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.  ಇನ್ನು  ಈ ಸಂಬಂಧ ಜಮೀನಿನ ಮಾಲೀಕರ ಮೇಲೆ ಗ್ರಾಮಂತರ ಪೋಲಿಸ್ ಠಾಣೆಯಲ್ಲಿ  ಎಫ್ ಐಆರ್  ದಾಖಲಾಗಿದೆ.

ಪಂಪ್ ಸೆಟ್  ವಿದ್ಯುತ್  ತಂತಿ ಅನಧಿಕೃತವಾಗಿ ಬೇಲಿ ಮೇಲೆ ಎಳೆದಿದ್ದರು. ವಿದ್ಯುತ್ ತಂತಿಯಲ್ಲಿ ಲೋಪವಾದ್ದರಿಂದ ವಿದ್ಯುತ್ ಜಮೀನಿನ ಬದುವಿನಲ್ಲಿ ಆವರಿಸಿಕೊಂಡಿದ್ದು  ಆ ಸಂದರ್ಭದಲ್ಲಿ ನೇಗಿಲು ತರಲು ಹೋದ ವ್ಯಕ್ತಿ ತಂತಿ ತಗುಲಿ ಸ್ಥಳದಲೇ ಮೃತಪಟ್ಟಿದ್ದು  ಪ್ರಕರಣ ದಾಖಲಾಗಿದೆ. 

ಸಿಪಿಐ ಬಾಲಚಂದ್ರ ನಾಯಕ್ ಗ್ರಾಮಾಂತರ ಪೋಲಿಸ್ ಠಾಣೆ

 

[t4b-ticker]

You May Also Like

More From Author

+ There are no comments

Add yours