ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸತ್ಯ ಹೊರ ಬೀಳಬೇಕು ಎಂದರೆ ದೂರುದಾರನ ಸರಿಯಾಗಿ ರುಬ್ಬಿ ಬಾಯಿ ಬಿಡಿಸಲು ಮುಖ್ಯಮಂತ್ರಿ ಪೋಲಿಸರಿಗೆ ತಿಳಿಸಬೇಕು. ಇನ್ನು ಅನೇಕ ಸಿಡಿಗಳು ಇವೆ ಎಂದು ಹೇಳುವವರು ಏಕೆ ಆ ಸಿಟಿಯನ್ನು ಚಿತ್ರಿಕರಿಸಿ ಇಟ್ಟುಕೊಂಡಿದ್ದಾರೆ. ಸಿಡಿ ಹೆಸರಲ್ಲಿ ಬ್ಲಾಕ್ ಮೆಲ್ ತಂತ್ರ ನಡೆಯುತ್ತಿದೆ. ಮಹಿಳೆ ಮತ್ತು ರಮೇಶ್ ಅವರ ಮಾತಿನಲ್ಲಿ ಇಬ್ಬರ ಸಲಿಗೆಯಿಂದ ಮಾತನಾಡಿರುವುದು ಸಂಭಾಷಣೆಯಲ್ಲಿ ತಿಳಿಯುತ್ತಿದೆ. ಆದರೆ ಗೌರವಾನ್ವಿತ ಸ್ಥಾನದಲ್ಲಿ ಇರುವವರು ಎಲ್ಲಾರಿಗೂ ಮಾದರಿಯಾಗಿರಬೇಕು ಅದಷ್ಟು ಬೇಗ ವಿಚಾರಣೆ ನಡೆಸಿ ಸತ್ಯಾಸತ್ಯತೆ ಜನರ ಮುಂದಿಡಿ ಎಂದು ಮನವಿ ಮಾಡಿದರು.
[t4b-ticker]
+ There are no comments
Add yours