ಚಿತ್ರದುರ್ಗ: (challakere) 10 ಸಾವಿರ ವಿದ್ಯಾರ್ಥಿಗಳೊಂದಿಗೆ ಇಂದು ಚಳ್ಳಕೆರೆ ನಗರದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ತಹಶೀಲ್ದಾರ್ ಎನ್. ರಘುಮೂರ್ತಿ ಇವರ ನೇತೃತ್ವದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಎನ್ ರಘುಮೂರ್ತಿ ಸರ್ಕಾರದ ಆಸೆಯಂತೆ ಕರ್ನಾಟಕದ ಏಕೀಕರಣಕ್ಕೆ ದುಡಿದಿರುವಂತಹ ಆಲೂರು ವೆಂಕಟರಾಯರು ಒಳಗೊಂಡಂತೆ ಎಲ್ಲ ಸಾಹಿತಿಗಳ ನಾಡಿನ ಪರಂಪರೆಯ ಪ್ರತೀಕವಾದಂತ ಬೇಲೂರು ಹಳೇಬೀಡು, ಶ್ರವಣಬೆಳಗೊಳ ಬಾದಾಮಿ ಐಹೊಳೆ ಪಟ್ಟದಕಲ್ಲು ಮುಂತಾದ ಸ್ಥಳದಲ್ಲಿರುವಂತಹ ಶಿಲ್ಪ ಕಲೆಗಳು ರನ್ನ ಪಂಪ ಕುಮಾರವ್ಯಾಸ ಕುವೆಂಪು ಬೇಂದ್ರೆ ಮಾಸ್ತಿ ಮುಂತಾದ ಕವಿಗಳ ಕನ್ನಡದ ಕಾವ್ಯಗಳು ಹಾಗೂ ಪರಂಪರೆಗೆ ಇನ್ನೊಂದು ಪ್ರತೀಕವಾದಂತ ಕನ್ನಡ ನಾಡನ್ನು ಪಾವನ ಮಾಡಿದಂತ ಕೃಷ್ಣೆ ಕಾವೇರಿ ಗೋದಾವರಿ ನರ್ಮದಾ ಕಪಿಲ ಭದ್ರೆ ತುಂಗೆ ಮುಂತಾದ ನದಿಗಳು ನಮ್ಮ ಕನ್ನಡ ನಾಡಿನ ಹೆಮ್ಮೆ ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ಸರ್ಕಾರದ ನಿರ್ದೇಶನದಂತೆ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಮುಖಾಂತರ ನಮ್ಮ ನಾಡಿನ ಕನ್ನಡ ನುಡಿ ಜಲ ಎಲ್ಲಾವುಗಳನ್ನು ಸಂರಕ್ಷಿಸಬೇಕಿದೆ ಎಂದರು.
ಕನ್ನಡ ಭಾಷೆಯನ್ನು ವೈಭವಿಕರಿಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡಯ್ಯಬೇಕಿದೆ. ಏನಿಟ್ಟಿನಲ್ಲಿ ಇಂದು ಇದರ ಬಗ್ಗೆ ಒಂದು ದೀಕ್ಷೆ ಪಡೆಯೋಣವೆಂದು ಹೇಳಿದರು ಆಯ್ದ 5 ಗೀತೆಗಳು ಹತ್ತು ಜನ ಗಾಯಕರು ಆಡಿ ಮನರಂಜಿಸಿದರು.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಗೀತೆಗೆ ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿದರು ಒಳಗೊಂಡಂತೆ ಕಾಯಕರುಗಳೊಂದಿಗೆ ಕನ್ನಡ ಗೀತೆಗಳು ಹಾಡಿ ಜನರಿಗೆ ಮನರಂಜನೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದಂತಹ ನರಸಿಂಹಮೂರ್ತಿ ರೈತ ಸಂಘದ ಅಧ್ಯಕ್ಷ ಕೆಪಿ ಬೂತಯ್ಯ ದೈಹಿಕ ಶಿಕ್ಷಣಾಧಿಕಾರಿ ಶಿವಮೂರ್ತಿ ಕರ್ನಾಟಕ ರಕ್ಷಣಾ ವೇದಿಕೆ ವೆಂಕಟೇಶ್ ಕುಮ್ಮಿ( ಚೇತನ್ ಕುಮಾರ್ ) ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪ್ರಿನ್ಸಿಪಾಲರುಗಳು ಶಿಕ್ಷಕರುಗಳು ಉಪಸ್ಥಿತರಿದ್ದರು.
[t4b-ticker]
+ There are no comments
Add yours