ರಾಜ್ಯ ಸುದ್ದಿ: ವಾಲ್ಮೀಕಿ ಸಮಾಜದ 7.5 ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಕ್ಟೋಬರ್-7 ಕ್ಕೆ ಸಿಎಂ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಆದರೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ನಮಗೆ ಪೂರ್ಣ ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಆತಂಕ ಇದೆ ಎಂಬ ಮಾತು ಗಳನ್ನಾಗಿಡಿದ್ದಾರೆ. ಅಂದು ಬೆಳಗ್ಗೆ 10 ಗಂಟೆ ವಿಪಕ್ಷ ನಾಯಕ ಎಸ್ಸಿ , ಎಸ್ಟಿ ಶಾಸಕರ ಸಭೆ ಕರೆದಿದ್ದಾರೆ. ನಂತರ ಸಿಎಂ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ರಾಜ್ಯ ವ್ಯಾಪಿ ವಾಲ್ಮೀಕಿ ಜಯಂತಿ ಬಹಿಷ್ಕಾರಿಸಿದ ಹಿನ್ನಲೆಯಲ್ಲಿ ಮೀಸಲಾತಿ ನೀಡುವ ಕೆಲಸ ಮಾಡಬಹುದು ಆದರೆ ಮುಂದೆ ಕಾನೂನು ತೊಡಕು ಉಂಟಾಗಬಹುದು, ಅವರ ಘೋಷಣೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಗಬಹುದು ಎಂದು ಸತೀಶ್ ಜಾರಕಿಹೊಳಿ ತಮ್ಮ ಅಭಿಪ್ರಾತ ಹಂಚಿಕೊಂಡಿದ್ದಾರೆ.
[t4b-ticker]
+ There are no comments
Add yours