ಚಳ್ಳಕೆರೆ-12 ವಿಶ್ವಹಿಂದೂಪರಿತ್ ಮತ್ತು ಭಜರಂಗದಳ ಸಹಯೋಗದಲ್ಲಿ ಪ್ರತಿಷ್ಠಾನನೆ ಮಾಡಿರುವ ವಿಶ್ವಹಿಂದೂ ಮಹಾಗಣಪತಿ ಸೆ.15 ರಂದು ನಡೆಯುವ ಶೋಭಾಯಾತ್ರೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ನಗರದ ಪ್ರಮುಖಬೀದಿಗಳಲ್ಲಿ ಸಂಚಾರ ನಡೆಸಿ ಜಾಗೃತಿ ಮೂಡಿಸಿದರು.
ಬಿಇಒ ಕಚೇರಿ ಆವರಣದಲ್ಲಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಜಯಪಾಲಯ್ಯ,
ವಿಶ್ವಹಿಂದೂಪರಿತ್ ಮತ್ತು ಭಜರಂಗದಳ ಪ್ರತಿಷ್ಠಾನೆ ಮಾಡಿರುವ ಗಣೇಶ ಮೂರ್ತಿಯ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಸೋಮವಾರ ನಗರದ ಪ್ರಮುಖ ಬೀದಿಗಳ ಮಕ್ಕಳು, ಮಹಿಳೆಯರು, ಹಿಂದೂ ಅಭಿಮಾನಿಗಳು, ವಿವಿಧ ಸಂಘಟನೆಯ ಮುಖಂಡರು ಸೇರಿದಂತೆ ನೂರಾರು ಹಿಂದೂ ಮುಖಂಡರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ ಎಂದರು.
ಶೋಭಾ ಯಾತ್ರೆ ಅಧ್ಯಕ್ಷ ಬಾಳೆಕಾಯಿ ರಾಮದಾಸ್ , ವಿಶ್ವ ಹಿಂದೂ ಪರಿಷದ್ ತಾಲೂಕ್ ಅಧ್ಯಕ್ಷ ಡಾ ಮಂಜುನಾಥ್, ವಿಶ್ವ ಹಿಂದೂ ಪರಿಷತ್ ನಗರ ಘಟಕ ಅಧ್ಯಕ್ಷ ಯತೀಶ್ , ಶಿವಪುತ್ರಪ್ಪ , ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.
[t4b-ticker]
+ There are no comments
Add yours