ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಸಚಿವರ ಕ್ಷೇತ್ರ ಸೇರಿ 3 ಟಿಕೆಟ್ ಘೋಷಣೆ ಇಲ್ಲ

 

ಚಿತ್ರದುರ್ಗ:ರಾಜ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಭಾರಿ ಪೈಪೋಟಿ ನಡುವೆ  ಬಿಡುಗಡೆ ಆಗಿರುವ ಮೊದಲ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೂರು ಕ್ಷೇತ್ರಗಳ ಟಿಕೆಟ್ ತಡೆ ಹಿಡಿಯಲಾಗಿದೆ‌. ಹೊಳಲ್ಕೆರೆ, ಮೊಳಕಾಲ್ಮುರು, ಚಿತ್ರದುರ್ಗ ಟಿಕೆಟ್ ಮೊದಲ ಪಟ್ಟಿಯಲ್ಲಿ ಘೋಷಣೆ ಆಗಿಲ್ಲ.. ವಿಶೇಷವಾಗಿ ಹೊಳಲ್ಕೆರೆ ಕ್ಷೇತ್ರ ಮಾಜಿ ಸಚಿವ ಹೆಚ್.ಆಂಜನೇಯ ಪ್ರತಿನಿಧಿಸುವ  ಕ್ಷೇತ್ರವಾಗಿದ್ದು ಇಲ್ಲಿ ಆಂಜನೇಯ ಸಹ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಟಿಕೆಟ್ ಘೋಷಣೆ ಆಗದಿರುವುದು ಆಂಜನೇಯ ಅವರಿಗೆ ಹಿನ್ನಡೆ ಎಂದು ಹೇಳಲಾಗುತ್ತಿದೆ.ಆಂಜನೇಯ ಅವರಿಗೆ ಸವಿತಾ ರಘು ಅವರು ಮಹಿಳಾ ಕೋಟಾದಡಿ ಭಾರಿ ಪೈಪೋಟಿ ಇದೆ.

ಮೊಳಕಾಲ್ಮುರು ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಯೋಗೇಶ್ ಬಾಬು ಅವರಿಗೆ ಟಿಕೆಟ್ ಫೈನಲ್ ಎಂದು ಹೇಳಲಾಗುತ್ತಿತ್ತು ಆದರೆ ಅವರ ಟಿಕೆಟ್ ಘೋಷಣೆ ಆಗದಿರುವುದರ ಹಿಂದೆ ಎನ್‌.ವೈ ಫ್ಯಾಮಿಲಿ ಅವರ ಹಿಡಿದ ಇದ್ದು ಮರಳಿ ಕಾಂಗ್ರೆಸ್ ಗೆ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ಇದೆ.
ಚಿತ್ರದುರ್ಗ ಕ್ಷೇತ್ರದಲ್ಲಿ ಕೆ.ಸಿ.ವೀರೇಂದ್ರ ಪಪ್ಪಿ, ಎಸ್.ಕೆ.ಬಸವರಾಜನ್, ರಘು ಆಚಾರ್ ನಡುವೆ ಟಿಕೆಟ್ ಫೈಟ್ ಇದ್ದು ವರಿಷ್ಠರು ಮಾತ್ರ ಜಾಣ ನಡೆ ಇಟ್ಟಿದ್ದು ಯಾರಿಗೆ ಟಿಕೆಟ್ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನು ಚಳ್ಳಕೆರೆ ಶಾಸಕ.ಟಿ‌ ರಘುಮೂರ್ತಿ, ಹಿರಿಯೂರು ಡಿ.ಸುಧಾಕರ್, ಹೊಸದುರ್ಗ ಗೋವಿಂದಪ್ಪ ಅವರಿಗೆ ಟಿಕೆಟ್ ನೀಡಿಲಾಗಿದೆ‌.
[t4b-ticker]

You May Also Like

More From Author

+ There are no comments

Add yours