ಸಮನ್ವಯ ವೇದಿಕೆಯವತಿಯಿಂದ ಮಾ.13ರಂದು ಮಹಿಳಾ ದಿನಾಚರಣೆ

 

 

 

 

ಚಿತ್ರದುರ್ಗ ಮಾ. ೧೦
ಜಿಲ್ಲಾ ಮಹಿಳಾ ಸಮನ್ವಯ ವೇದಿಕೆಯವತಿಯಿಂದ ಮಾ.೧೩ರ ಬಾನುವಾರ ನಗರದ ತರಾಸು ರಂಗಮಂದಿರದಲ್ಲಿ ಅಂತರಾಷ್ಟ್ರೀಯ ರಾಷ್ಟೀಯ ಮಹಿಳಾ ದಿನಾಚರಣೆಯ ಆಂಗವಾಗಿ ಜಿಲ್ಲಾ ಮಹಿಳಾ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ವೇದಿಕೆ ಸಂಚಾಲಕರಾದ ಶ್ರೀಮತಿ ನಾಗರತ್ನ ಬದರಿನಾಥ್ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅಕ್ಷಯ ಗೋಖಲೆಯವರು ರಾಷ್ಟç ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಇವರೊಂದಿಗೆ ತೇಜಸ್ವಿನಿ ಆನಂತಕುಮಾರ್ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸುಮಾರು ೩೦ ಮಹಿಳಾ ಸಂಘಟನೆಗಳು ಕೈಜೋಡಿಸಿದೆ. ಇದರಲ್ಲಿ ತೇಜಸ್ವಿಯವರ ಅಡುಗೆ ಮನೆಗೆ ಸಂಬAಧಪಟ್ಟAತೆ ಮಾಹಿತಿಯನ್ನು ನೀಡಲಿದ್ದಾರೆ. ಇವರು ಹಲವಾರು ಶಾಲೆಗಳಿಗೆ ತಮ್ಮ ಮನೆಯಿಂದ ಅಡುಗೆಯನ್ನು ತಯಾರು ಮಾಡಿ ಕಳುಹಿಸುತ್ತಿದ್ದಾರೆ. ಇದರೊಂದಿಗೆ ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಗುಡಿ ಕೈಗಾರಿಕೆಯನ್ನು ಮಾಡಿಕೊಂಡು ವಿವಿಧ ರೀತಿಯ ಉತ್ಪನ್ನಗಳನ್ನು ತಯಾರು ಮಾಡುತ್ತಿರುವವರಿಗೆ ಉದ್ಯೋಗ ಭಾರತಿ ಯೋಜನೆಯಡಿ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ವೇದಿಕೆ ಕೆಲಸ ಮಾಡಲಿದೆ ಎಂದು ನಾಗರತ್ನ ತಿಳಿಸಿದರು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಶಿವರಾಂ ಮಾತನಾಡಿ, ಜಿಲ್ಲೆಯಲ್ಲಿ ಸ್ತಿçಶಕ್ತಿ ಸಂಘದವರಿಗೆ ಅಗತ್ಯವಾಗಿ ಬೇಕಾದ ಮಾರುಕಟ್ಟೆಯನ್ನು ನಿರ್ಮಾಣ ಮಾಡುವುದಲ್ಲದೆ. ಬ್ಯಾಂಕ್ ನಿಂದ ಮತ್ತು ಸರ್ಕಾರದವತಿಯಿಂದ ಸಿಗಬೇಕಾದ ವಿವಿಧ ರೀತಿಯ ಸೌಲಭ್ಯಗಳನ್ನು ಕೂಡಿಸುವಲ್ಲಿಯೂ ಸಹಾ ವೇದಿಕೆ ಕೆಲಸ ಮಾಡಲಿದೆ ಎಂದರು.
ವೇದಿಕೆಯ ಅಧ್ಯಕ್ಷರಾದ ಜ್ಯೋತಿ ಲಕ್ಷö್ಮಣ್, ಗೌರವ ಅಧ್ಯಕ್ಷರಾದ ಶ್ರೀಮತಿ ವೀಣಾ ಸ್ವಾಮಿ, ಉಪಾಧ್ಯಕ್ಷರಾದ ಉಮಾ ನಾಗರಾಜ್, ಜಯಶ್ರೀ ಷಾ, ಖಂಜಾಚಿ ಸುಮಾ, ಪದಾಧಿಕಾರಿಗಳಾದ ರಾಜೇಶ್ವರಿ, ಸುಜಾತ ಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours