ವೃತ್ತಿಯ ಬಂಡಿ ನಿಲ್ಲಿಸಿದ ಚಾಲಕ ತಿಪ್ಪೇಸ್ವಾಮಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆತ್ಮೀಯ ಬೀಳ್ಕೊಡುಗೆ.

 

ಚಿತ್ರದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ  ಉಪ ನಿರ್ದೇಶಕರ ವಾಹನ ಚಾಲಕರಾಗಿ ತಿಪ್ಪೇಸ್ವಾಮಿ ಅವರು  ಸುಮಾರು 30 ಕ್ಕೂ ಹೆಚ್ಚು ವರ್ಷಗಳಿಂದ  ಕಾರ್ಯನಿರ್ವಹಿಸುತ್ತಿದ್ದು ಇಂದು ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ್ದಾರೆ.  ಇವರ  ಬೀಳ್ಕೊಡುಗೆ ಕಾರ್ಯಕ್ರಮವನ್ನು ಇಲಾಖೆ ವತಿಯಿಂದ ವಿಶೇಷವಾಗಿ ನಡೆಸಿಕೊಟ್ಟರು. ಈ ಕಾರ್ಯಕ್ರಮದ ವಿಶೇಷ ಎಂದರೆ ಯಾವ ಯಾವ ಉಪನಿರ್ದೇಶಕರಿಗೆ ಚಾಲಕರಾಗಿ ಕೆಲಸ ಮಾಡಿದ್ದರೋ ಆ ಎಲ್ಲಾ ಅಧಿಕಾರಿಗಳು ನಿವೃತ್ತಿ ಆಗಿದ್ದರೂ ಸಹ ಅವರು ಇಂದು ಚಾಲಕನ  ನಿವೃತ್ತಿ  ಬೀಳ್ಕೊಡುಗೆ ಕಾರ್ಯಕ್ರಮಕ್ಕೆ  ಸಾಕ್ಷಿಯಾದರು.

 

ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಕೆ.ಎಸ್. ರಾಜನಾಯ್ಕ,   ನಿವೃತ್ತ  ಜಂಟಿ ನಿರ್ದೇಶಕರಾದ ಚಿದಾನಂದ್, ನಂಜೇಗೌಡರು, ಪರಮೇಶ್ವರಪ್ಪ, ಹಾಗೂ ನಿವೃತ್ತ  ಉಪ ನಿರ್ದೇಶಕರಾದ ರಮೇಶ್ ಹಾಲ್ಬಾವಿ, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜೆ.ವೈಶಾಲಿ, ಜಿಲ್ಲಾ ಮಕ್ಕಳ ರಕ್ಷಣ ಅಧಿಕಾರಿ ಲೋಕೇಶಪ್ಪ, ಸಿಡಿಪಿಓ ಸುಧಾ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours