ವಾಲ್ಮೀಕಿ ಜಾತ್ರೆ ಸಮಿತಿ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಆಯ್ಕೆ.

 

ದಾವಣಗೆರೆ: ಚಳ್ಳಕೆರೆಯ ಜನಪ್ರಿಯ ಶಾಸಕ ಟಿ.ರಘುಮೂರ್ತಿ ಅವರನ್ನು ನಾಲ್ಕನೆಯ ವರ್ಷದ ವಾಲ್ಮೀಕಿ ಜಾತ್ರೆ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ರಾಜನಹಳ್ಳಿ ಗುರುಪೀಠದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿಗಳು ಮಾತನಾಡಿ ರಾಜ್ಯದಲ್ಲಿ ನಾಯಕ ಸಮಾಜ ಸಂಘಟನೆಯಾಗಬೇಕಿದೆ. ರಾಜ್ಯದ ಉದ್ದಗಲಕ್ಕೂ ಸುತ್ತಿ ಹಳೆಯ ಗುರುಗಳು ಅಪಘಾತದಲ್ಲಿ ಸಾವನ್ನಪಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ಮಠ ನಡೆಯುತ್ತಿದೆ. ಸಂಘಟನೆಗೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು ಎಂದರು. ನಾವು ಸಹ ಸಮಾಜದ ಒಳಿತಿಗಾಗಿ ಹೋಟ ಮಾಡುತ್ತಿದ್ದೇವೆ. ಇನ್ನು ಮುಂದಿನ ದಿನದಗಳಲ್ಲಿ ಎಲ್ಲಾರು ಒಟ್ಟಾಗಿ ನಮ್ಮ‌ಹಕ್ಕುಗಳಿಗಾಗಿ ಹೋರಟ ಮಾಡಬೇಕಾಗಿದೆ ಎಂದು ತಿಳಿಸದರು. ಹಾಗೂ ವಾಲ್ಮೀಕಿ ಜಾತ್ರೆಗೆ ಎಲ್ಲಾ ಸ್ವಾಮೀಜಿಯವರು, ರಾಜ್ಯದ ಎಲ್ಲಾ ಪಕ್ಷದ ಜನಪ್ರತಿನಿಧಿಗಳು, ಗಣ್ಯರು, ಸರ್ವ ಜನಾಂಗದ ಜನರನ್ನು ಬಂದು ಮಾಡುವಂತಹ ಜಾತ್ಯತೀತ ಜಾತ್ರೆಯಾಗಿ ಮಾಡಲಾಗುತ್ತದೆ. ಜಾತ್ರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.ಇದಕ್ಕೆ ಪೂರ್ವಭಾವಿ ಸಭೆಯ ಮೂಲಕ‌ ಸಕಲ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಟಿ.ರಘುಮೂರ್ತಿ, ಎಸ್.ವಿ.ರಾಮಚಂದ್ರಪ್ಪ, ಹೊದಿಗೆರೆ ರಮೇಶ್, ಹರ್ತಿಕೋಟೆ ವಿರೇಂದ್ರ ಸಿಂಹ, ಓಬಳಪ್ಪ ಇದ್ದರು.

[t4b-ticker]

You May Also Like

More From Author

+ There are no comments

Add yours