ಲಕ್ಷ್ಮಿಸಾಗರ ಸಮೀಪ ಬೈಕ್ ಅಪಘಾತ, ಸ್ಥಳದಲ್ಲೇ ಬೈಕ್ ಸವಾರ ಸಾವು

 

ಚಿತ್ರದುರ್ಗ: ಲಕ್ಷಿಸಾಗರ ಸಮೀಪ ಬಳಿ ಬೈಕ್ ಅಪಘಾತ ಸಂಭವಿಸಿ  ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಇನ್ನೂ ಮೃತ ಬೈಕ್ ಸಾವರನನ್ನ ಚಿತ್ರದುರ್ಗ ನಗರದ ಚಿಕ್ಕಪೇಟೆ ನೀವಾಸಿ 38 ವರ್ಷದ ಕುಮಾರಸ್ವಾಮಿ ಎಂದು ಗುರುತಿಸಲಾಗಿದೆ. ಇನ್ನೂ ಬೈಕ್ ಸವಾರನು ದಾವಣಗೆರೆಯಲ್ಲಿ ಸೇಲ್ಸ್ ಸರ್ವಿಸ್ ಸೆಂಟರ್ ಒಂದನ್ನ ಇಟ್ಟುಕೊಂಡಿದ್ದು ರಾತ್ರಿ ಕೆಲಸ ಮುಗಿಸಿಕೊಂಡು ತಡರಾತ್ರಿ ಚಿತ್ರದುರ್ಗಕ್ಕೆ ಬರುವಾಗ ಬೈಕ್ ಲಕ್ಷಿಸಾಗರ ಸಮೀಪದ ರೆಡ್ಡಿ ಪೆಟ್ರೋಲ್ ಬಂಕ್ ಬಳಿ ಬಂದಾಗ ಎದುರಿಗೆ ಹೋಗುತ್ತಿದ್ದ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಇನ್ನೂ ವ್ಯಕ್ತಿಯು ತನ್ನ ಬೈಕ್ ಅನ್ನ ಅತೀವೇಗ ಹಾಗೂ ಅಜಾಕೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನೂ ಘಟನಾ ಸ್ಥಳಕ್ಕೆ ಭರಮಸಾಗರದ ಪೋಲಿಸ್ ಠಾಣೆಯ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ದೂರನ್ನ ದಾಖಲಿಸಿಕೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours