ಚಿತ್ರದುರ್ಗ,ಜೂನ್19:
2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖಾ ಕಾರ್ಯಕ್ರಮಗಳಡಿ ರಿಯಾಯಿತಿ ದರದಲ್ಲಿ ಪ್ರಮಾಣಿತ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯಲ್ಲಿ ಶೇಂಗಾ ಬಿತ್ತನೆ ಬೀಜಕ್ಕೆ ಸರ್ಕಾರ ನಿಗಧಿಪಡಿಸಿದ ಸಂಸ್ಥೆಗಳಿಂದ ಪೂರೈಸಲು ಈ ಹಿಂದೆ ನಿಗಧಿಪಡಿಸಿದ್ದ ದರಕ್ಕೆ ಅನುಗುಣವಾಗಿ ಪ್ರತಿ ಕ್ವಿಂಟಾಲ್ಗೆ ರೂ.400/-ಗಳ ದರವನ್ನು ಕಡಿತಗೊಳಿಸಿರುತ್ತಾರೆ.
ಆದ್ದರಿಂದ ರೈತರಿಗೆ ಸರ್ಕಾರದ ಸಹಾಯಧನದ ಜೊತೆಗೆ ಪ್ರತಿ 30 ಕೆ.ಜಿ ಬ್ಯಾಗ್ಗೆ ರೂ.120/-ಗಳನ್ನು ಹೆಚ್ಚುವರಿಯಾಗಿ ಕಡಿತಗೊಳಿಸಿದೆ. ಆದ್ದರಿಂದ ಶೇಂಗಾ ಬಿತ್ತನೆ ಬೀಜ ಪಡೆಯುವ ರೈತ ಬಾಂಧವರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಡಾ.ಪಿ.ರಮೇಶ್ಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ಸಮೀಪದ ರೈತಸಂಪರ್ಕ ಕೇಂದ್ರಗಳಿಗೆ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಕೋರಿದೆ.
[t4b-ticker]
+ There are no comments
Add yours