ಮಾನಸಿಕ ಖಿನ್ನತೆಯಿಂದ ಗೃಹಿಣಿಯೊಬ್ಬಳು ನೇಣಿಗೆ ಶರಣು

 

ಮಾನಸಿಕ ಖಿನ್ನತೆಯಿಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಭೀಮಸಮುದ್ರ ಬಳಿಯ ತುರೆಬೈಲು ಬಳಿ ನಡೆದಿದೆ. ಇನ್ನೂ ಮೃತ ಮಹಿಳೆಯನ್ನ ಭೀಮಸಮುದ್ರ ಬಳಿಯ ತುರೆಬೈಲು ಹೇಮಕ್ಕ ಎಂದು ಗುರುತಿಸಲಾಗಿದೆ. ಇನ್ನೂ ಮೃತ ಹೇಮಕ್ಕ ಅವರಿಗೆ ಹೀಗೆ ಕಳೆದ ಏಳರಿಂದ ಎಂಟು ತಿಂಗಳಿನಿಂದ ಗರ್ಭಕೋಷ ಮತ್ತು ಅಪೆಂಡಿಕ್ಸ್ ಆಪರೇಷನ್ ಮಾಡಿಸಿದ್ದು ಕಳೆದ ನಾಲ್ಕು ತಿಂಗಳಿನಿಂದ ಅಪರೇಷನ್ ಮಾಡಿಸಿದ ಜಾಗದಲ್ಲಿ ವಿಪರೀತ ಹೊಟ್ಟೆನೊವ್ವು ಬರುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು ಸಹ ವಾಸಿಯಾಗಿರಲಿಲ್ಲ. ಇದರಿಂದ ಹೇಮಕ್ಕ ಅವರು ತೀರ್ವವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಏನಾದರು ಮಾಡಿಕೊಂಡು ಸಾಯುವುದಾಗಿ ಹೇಳುತ್ತಿದ್ದರು ಎನ್ನಲಾಗಿದೆ ‌. ಹೀಗಿರುವಾಗಲೇ ಹೇಮಕ್ಕ ಅವರು ಮನೆಯಲ್ಲಿ ಯಾರು ಇರದ ವೇಳೆಯಲ್ಲಿ ಮನೆಯ ಮೇಲ್ಚಾವಣಿಯಲ್ಲಿದ್ದ ಆಂಗ್ಲರ್ ಗೆ ಸೀರೆಯಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದು ಘಟನೆ ಸಂಬಂದವಾಗಿ ಚಿತ್ರದುರ್ಗದ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ಧಾಖಲಾಗಿದೆ

[t4b-ticker]

You May Also Like

More From Author

+ There are no comments

Add yours