ಚಿತ್ರದುರ್ಗ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಬಳ್ಳಾರಿಗೆ ಹೋಗುತ್ತೇನೆ ಎಂದು ಹೇಳುತ್ತಿರುವವರಿಗೆ ಮಾಡಲು ಕೆಲಸವಿಲ್ಲ ಅದಕ್ಕೆ ಆ ರೀತಿಯಲ್ಲಿ ಹೇಳುತ್ತಾರೆ ಎಂದು ವಿರೋಧಿಗಳಿಗೆ ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದರು. ಬಳ್ಳಾರಿ ನನಗೆ ಜೀವವಾದರೆ ಮೊಳಕಾಲ್ಮುರು ನನಗೆ ಆತ್ಮವಿದ್ದಂತೆ. ಒಂದನೊಂದು ಬಿಡುವುದಿಲ್ಲ. ಮೊಳಕಾಲ್ಮುರಿನ ಜನರು ನನ್ನನ್ನು ಗೆಲ್ಲಿಸಿ ಮಂತ್ರಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಮೊಳಕಾಲ್ಮುರು ಬಿಡಲ್ಲ. ರಾಜಕಾರಣ ಬಿಡುತ್ತೇನೆ ಒರತು ಮೊಳಕಾಲ್ಮುರು ಅಲ್ಲ ಎಂದು ಒಂದು ರೀತಿಯ ಶಪಥ ಮಾಡಿದರು. ಮುಂದಿನ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ವರ್ಧೆ ಮಾಡುತ್ತೇನೆ ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.
[t4b-ticker]
+ There are no comments
Add yours