ಮಂದಕೃಷ್ಣ ಮಾದಿಗ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಎಚ್.ಆಂಜನೇಯ.

 

 

ಚಿತ್ರದುರ್ಗ.:25 :

ಚಿತ್ರದುರ್ಗ: ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರನ್ನು ಹೈದರಾಬಾದ್‍ನ ಅವರ ನಿವಾಸದಲ್ಲಿ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯರವರು ಸೋಮವಾರ ಬೆಳಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.

ಇತ್ತೀಚೆಗೆ ದೆಹಲಿಯ ಹೊಟೇಲ್‍ವೊಂದರ ಬಾತ್‍ರೂಮ್‍ನಲ್ಲಿ ಜಾರಿ ಬಿದ್ದು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದ ಮಂದಕೃಷ್ಣ ಮಾದಿಗರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲು ಈಗ ಹೈದರಾಬಾದ್ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದಿನ ಮಂದಕೃಷ್ಣ ಮಾದಿಗರ ನಿವಾಸಕ್ಕೆ ಸೋಮವಾರ ಬೆಳಗ್ಗೆ ಬೇಟಿ ನೀಡಿದ್ದ ಮಾಜಿ ಸಚಿವ ಎಚ್.ಆಂಜನೇಯರವರು ಗಂಟೆಗಳ ಕಾಲ ಜೊತೆ ಇದ್ದು ಆರೋಗ್ಯ ಚೇತರಿಕೆಗೆ ಹಾರೈಸಿದರು. ಈ ಸಂದರ್ಭದಲ್ಲಿ ಸಮುದಾಯದ ವಿವಿಧ ಸಮಸ್ಯೆ. ಸವಾಲುಗಳ ಕುರಿತು ಈ ಇಬ್ಬರು ದಿಗ್ಗಜ ಮುಖಂಡರು ಅನೌಪಚಾರಿಕವಾಗಿ ಚರ್ಚೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಯಾದಗಿರಿ ಸಿಎಂಸಿ ಕಾರ್ಪೋರೆಟರ್ ಹನುಂಮತನಾಯ್ಕ್, ಗಣೇಶ್ ದುಪ್ಪೋಳಿ, ಯಾದಗಿರಿ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಾಹೇಬ್ರೋಟಿ, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಕವಾಲಿ, ಮುಖಂಡರಾದ ಪುಂಡೇ ಭಗವಾತ್, ವೀರಾಂಜನೇಯ, ವಿಲಾಸ್ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours