ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಲೀಡ್ ವಿದ್ಯಾರ್ಥಿಗಳಿಂದ ಗ್ರೀಟಿಂಗ್ಸ್….

 

ಹಿರಿಯೂರು:

ಲೀಡ್ ದೇಶಪಾಂಡೆ ಫೌಂಡೇಶನ್ ವತಿಯಿಂದ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಲೀಡ್ ವಿದ್ಯಾರ್ಥಿಗಳು ಗ್ರೀಟಿಂಗ್ಸ್ ಕಾರ್ಡ್ ನಲ್ಲಿ ಅವರ ಸಂದೇಶ ರವಾನೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಹಾಗೂ ಇಕೋ ಫ್ರೆಂಡ್ಲಿ ರಾಖಿ ಹಬ್ಬದ ಆಚರಣೆ ಮಾಡಲು, ಮನೆಯಲ್ಲಿ ಸಿಗುವ ಎಲ್ಲ ರೀತಿಯ ಕಾಳುಗಳನ್ನು (seeds) ಬಳಸಿ ರಾಖಿ ತಯಾರಿಸಿ ಅವುಗಳನ್ನು ಇಂಡಿಯನ್ ಆರ್ಮಿ ಬೆಟಾಲಿಯನ್ ಗೆ ಕಳುಹಿಸಿ ಕೊಡುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದೇವೆ.

ನಂತರದಲ್ಲಿ ರಾಖಿಯಲ್ಲಿರುವ ಕಾಳುಗಳನ್ನು ಮಣ್ಣನಲ್ಲಿ ಹಾಕುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ.

ಈ ಚಟುವಿಕೆಯಲ್ಲಿ ಹಿರಿಯೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಿಯದರ್ಶಿನಿ ಮತ್ತು ಕವನಪ್ರಿಯಾ ಹಾಗೂ ಇತರೆ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯ ಸೇನೆಗೆ ತಮ್ಮದೇ ಆದ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours