ಚಿತ್ರದುರ್ಗ: ಹಂಪಯ್ಯನಮಾಳಿಗೆ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಎರಡು ಲಕ್ಷ ನಷ್ಟ ಉಂಟಾಗಿದೆ. ಇನ್ನೂ ಚಿತ್ರದುರ್ಗ ತಾಲ್ಲೂಕಿನ ಹಂಪಯ್ಯನಮಾಳಿಗೆ ಗ್ರಾಮದ ಮಹಾಲಿಂಗಪ್ಪ ಎಂಬುವವರ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಅಂದಾಜು 30 ಸಾವಿರ ಮೌಲ್ಯದ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದ್ದು ಇದರ ಜೊತೆಗೆ ಮನೆ ಕಟ್ಟಿಸಲು ತಂದಿಟ್ಟಿದ್ದು 50 ಸಾವಿರ ಮೌಲ್ಯದ ಹೆಬ್ಬೇವು ಹಾಗೂ ಬೇವಿನ ಮರದ ತುಂಡುಗಳು ಸುಟ್ಟು ಕರಕಲಾಗಿದೆ. ಇನ್ನೂ ಅಲ್ಲೆ ಹುಲ್ಲಿನ ಬಣವೆ ಪಕ್ಕದ ಬೇಲಿಯಲ್ಲಿದ್ದ 20 ಕ್ಕೂ ಹೆಚ್ಚು ಗಂಧ ತ್ಯಾಗದ ಮರಗಳು ಸಹ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದು ಗ್ರಾಮದ ಮಹಾಲಿಂಗಪ್ಪ ಅವರಿಗೆ ಅಂದಾಜು ಒಟ್ಟಾರೆ ಎರಡು ಲಕ್ಷ ನಷ್ಟ ಉಂಟಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಗ್ರಾಮಸ್ಥರು ಸೇರಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದು ಕಂಡು ಬಂದಿದೆ.
[t4b-ticker]
+ There are no comments
Add yours