ಯಡಿಯೂರಪ್ಪ ಬಿಜೆಪಿಗೆ ದೊಡ್ಡ ಶಕ್ತಿ, ಪಕ್ಷ ಶಕ್ತ ಕುಂದಿಸುವ ಕೆಲಸ ಮಾಡಲ್ಲ: ಸಚಿವ ಬಿ.ಶ್ರೀರಾಮುಲು

 

 

 

 

ಬಳ್ಳಾರಿ: ಮಾಜಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ  ಎಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಕೈ ಬಿಡಲ್ಲ. ಬಿಜೆಪಿಗೆ ಅವರು ದೊಡ್ಡ ಶಕ್ತಿ, ರಾಜ್ಯಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅವರು ಶಕ್ತಿ ಕುಗ್ಗಿಸುವ ಕೆಲಸ ಪಕ್ಷದಲ್ಲಿ ನಡೆಯುವುದಿಲ್ಲ.

 

 

ಮುಂದೆ ಸಹ ಬಿಎಸ್ವೈ ಪಕ್ಷದಲ್ಲಿ ಇರ್ತಾರೆ. ಅವರ ಶಕ್ತಿ ಕುಂದಿಸುವ ಕೆಲಸ ಬಿಜೆಪಿ ಯಾವತ್ತೂ ಮಾಡಲ್ಲ ಎಂದರು.

ಸಾರ್ವತ್ರಿಕ ವಿಧಾನ ಸಭೆ   ಚುನಾವಣೆ ಹತ್ತಿರವಿದೆ ಹೀಗಾಗಿ ವಿಜಯೇಂದ್ರ ಅವರಿಗೆ ಎಂ ಎಲ್ ಸಿ ಟಿಕೆಟ್ ಕೊಟ್ಟಿಲ್ಲ. ಅವರನ್ನು ಗುರುತಿಸುವ ಕೆಲಸ ಪಕ್ಷ ಮಾಡಲಿದೆ. ಬರುವ ವಿಧಾನಸಭೆ ಎಲೆಕ್ಷನ್‌ಗೆ ವಿಜೇಂದ್ರ ಅವರಿಗ ಅವಕಾಶ ನೀಡದಕೆಂದು ಪಕ್ಷ ಯೋಚಿಸಿದೆ.
ವಿಜಯೇಂದ್ರ ಕೇವಲ ಶಾಸಕರಿಂದ ಆಯ್ಕೆ ಆಗುವುದು  ಬೇಡ
ಜನರ ಮಧ್ಯೆಯಿಂದ ಆಯ್ಕೆ ಆಗಬೇಕು  ಎಂದು ಪಕ್ಷ ಬಯಸಿದಂತಿದೆ ಎಂದು ಬಿಎಸ್ ವೈ ಪರವಾಗಿ ಬ್ಯಾಟ್ ಬೀಸಿದರು.

[t4b-ticker]

You May Also Like

More From Author

+ There are no comments

Add yours