ಮೇಕೆದಾಟು ಪಾದಯಾತ್ರೆಯಲ್ಲಿ ತಮಟೆ
ಬಡಿದು ಚಾಲನೆ ನೀಡಿದ ಮಾಜಿ ಸಚಿವ
ಎಚ್.ಆಂಜನೇಯ.
ಚಿತ್ರದುರ್ಗ:ಜ.12
ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ
ಮೇಕೆದಾಟು ಐತಿಹಾಸಿಕ ಪಾದಯಾತ್ರೆಯ
ನಾಲ್ಕನೇ ದಿನವಾದ ಬುಧವಾರ ರಾಜ್ಯದ ವಿವಿಧ
ಮೂಲಗಳಿಂದ ಆಗಮಿಸಿರುವ ಸಾವಿರ
ಕಾರ್ಯಕರ್ತರ ಭರ್ಜರಿ
ಪಾದಯಾತ್ರೆಯೂ ಸಂಚಲನ ಮೂಡಿಸಿತು.
ಈ ಪಾದಯಾತ್ರೆಯಲ್ಲಿ ಸತತ ನಾಲ್ಕನೇ
ದಿನವೂ ಭಾಗವಹಿಸಿದ್ದ ಮಾಜಿ ಸಚಿವ
ಎಚ್.ಆಂಜನೇಯರವರು ತಮ್ಮೊಡನೆ
ಹೆಜ್ಜೆಹಾಕಿದ ಸಾವಿರಾರು
ಕಾರ್ಯಕರ್ತರನ್ನು ಹುರಿದುಂಬಿಸಲು
ಬುಧವಾರ ಬೆಳಗ್ಗೆ ಸ್ವತಃ ತಮಟೆ ಹಿಡಿದು
ಲಯ ಬದ್ಧವಾಗಿ ಬಡಿದ ಮಾಜಿ ಸಚಿವ
ಎಚ್.ಆಂಜನೇಯರವರ ತಮಟೆಯ ತಾಳ
ಪಾದಯಾತ್ರೆ ಮೆರವಣಿಗೆ ವಿಶೇಷ ಕಳೆ
ತಂದಿತ್ತು.
[t4b-ticker]
+ There are no comments
Add yours