ಮೀನು ಪಾಶುವಾರು ನೇರಗುತ್ತಿಗೆಗೆ ಅರ್ಜಿ ಆಹ್ವಾನ
ಚಿತ್ರದುರ್ಗ (ಕರ್ನಾಟಕ ವಾರ್ತೆ) ಮೇ10: 2022ರ ಜುಲೈ 1 ರಿಂದ 2027 ರ ಜೂನ್ 30 ರವರೆಗೆ ಮೀನುಗಾರಿಕೆ ಫಸಲಿ ವರ್ಷದ ಅನುಸಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಜಲ ಸಂಪನ್ಮೂಲಗಳಲ್ಲಿನ ಮೀನು ಪಾಶುವಾರು ಹಕ್ಕುನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಸರ್ಕಾರದ ನಿಯಮಗಳ ಮೇರೆಗೆ ಅರ್ಹ ಮೀನುಗಾರರ ಸಹಕಾರ ಸಂಘಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿಲೇವಾರಿ ಮಾಡಲು ಪ್ರಸ್ತಾಪಿಸಿರುವ ಸರ್ಕಾರಿ ಜಲ ಸಂಪನ್ಮೂಲಗಳ ಸ್ಥಳಗಳಾದ ಹೊಸದುರ್ಗ ತಾಲ್ಲೂಕಿನ ದೇವಪುರ, ಗಂಜಿಗೆರೆÉ, ಮತ್ತೋಡು, ಗುಡ್ಡದನೇರಲ, ಸೂಜಿಕಲ್ ಅಮಾನಿ, ಹೊಳಲ್ಕರೆ ತಾಲ್ಲೂಕಿನ ಹೊಳಲ್ಕರೆ ಹೀರೆಕೆರೆ, ಕುಡಿನೀರ್ ಕಟ್ಟೆ , ಗಂಗಸಮುದ್ರ, ತಾಳಿಕಟ್ಟೆ, ವಡೇರಹಳ್ಳಿ, ದೇವರ ಹೊಸಹಳ್ಳಿ, ಚಿಕ್ಕಎಮ್ಮಿಗನೂರು, ಕೆರೆಯಾಗಲಹಳ್ಳಿ, ಗೂಳಿಹೊಸಹಳ್ಳಿ, ಹಿರಿಯೂರು ತಾಲೂಕಿನ ಗೂಳ್ಳಕೆರೆ, ಬೀರನಹಳ್ಳಿ, ಐಮಂಗಲ ದೊಡ್ಡಕೆರೆ , ತವಂದಿ, ಗೌನಹಳ್ಳಿ, ಉಳಿವಿನಾಳ್, ಕೂನಿ, ಸೂಗೂರು, ಬೇತೂರು, ಧರ್ಮಪುರ, ಹಲಗಲದ್ದಿ, ಭರಂಪುರ, ಮುಂಗುಸನಳ್ಳಿ, ಇಕ್ಕನೂರು, ಯಲ್ಲದ ಕೆರೆ, ಹೊಸಕೆರೆ, ಎಂ.ಡಿ.ಕೋಟೆ, ಅಂಬಲಗೆರೆ, ಜವಗೊಂಡನಹಳ್ಳಿ, ರಂಗೇನಹಳ್ಳಿ, ಹಾಲುದ್ಯಾವನಹಳ್ಳಿ, ಮೇಟಿಕುರ್ಕೆ, ಬಗ್ಗನಡು, ಉಡುವಳ್ಳಿ, ಗಾಂಧಿನಗರ ಕೆರೆಗಳು ಮತ್ತು ನದಿ ಭಾಗಗಳಾದ ನಾರಾಯಣಪುರ ನದಿಭಾಗ, ಗಾಯತ್ರಿ ಕೋಡಿ ಮತ್ತು ಜಲ್ದಿಹೊಳೆ ಕೆರೆ ಗಳಿಗೆ ಜಲಸಂಪನ್ಮೂಲಗಳ ಮೀನು ಪಾಶುವಾರು ಹಕ್ಕುನ್ನು (ಅನುಬಂಧ-10) ಪಡೆಯಲಿಚ್ಫಿಸುವ ಅರ್ಹ ಮೀನುಗಾರರು ಸಹಕಾರ ಸಂಘದವರು ಮಾತ್ರ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಮೇ 30 ರೊಳಗಾಗಿ ಸಂಬಂದಪಟ್ಟ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಲಾಗುವುದಿಲ್ಲ. ಗುತ್ತಿಗೆ ಪಡೆಯಲು ಸಲ್ಲಿಸ ಬೇಕಾದ ಅರ್ಜಿ (ಅನುಬಂಧ-9) ಷರತ್ತು ಮತ್ತು ನಿಬಂಧನೆಗಳ (ಅನುಬಂಧ-11) ಮತ್ತು ಗುತ್ತಿಗೆದಾರರು ಬರೆದು ಕೊಡಬೇಕಾದ ಗುತ್ತಿಗೆ ಕರಾರಿನ ಮುಚ್ಚಳಿಕೆ ಪತ್ರದ (ಅನುಬಂಧ-10) ರ ಪ್ರತಿಯನ್ನು ಕಚೇರಿಯಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
[t4b-ticker]
+ There are no comments
Add yours