ಚಿತ್ರದುರ್ಗ, ಮಾರ್ಚ್04:
ಚಿತ್ರದುರ್ಗ ನಗರ ಉಪವಿಭಾಗದ ಘಟಕ-1ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯು ಚಾಲನೆಯಲ್ಲಿರುವ ಕಾರಣ ಹಾಗೂ ತುರುವನೂರು ರಸ್ತೆಯ ಅಗಲೀಕರಣ ಕಾಮಗಾರಿಯು ಚಾಲನೆಯಲ್ಲಿರುವ ಕಾರಣ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಸ್ಥಳಾಂತರಿಸಲು ಮಾರ್ಚ್ 06ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಜೆಸಿಆರ್ 1ನೇ ಕ್ರಾಸ್ನಿಂದ 7ನೇ ಕ್ರಾಸ್ ವರೆಗೆ, ವಿ.ಪಿ.ಬಡಾವಣೆ, ಬಡಾಮಕಾನ್ ಸುತ್ತಮುತ್ತ, ಆಜಾದ್ ನಗರ, ಹೊರಪೇಟೆ, ಗೋಪಾಲಪುರ ರಸ್ತೆ ಸುತ್ತಮುತ್ತ, ಪ್ರಸನ್ನ ಟಾಕೀಸ್ ಸುತ್ತಮುತ್ತ, ರಾಮ್ದಾಸ್ ಕಾಂಪೌಂಡ್ ಸುತ್ತಮುತ್ತ, ಹಿಮ್ಮತ್ ನಗರ ಸುತ್ತಮುತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ.
ತುರುವನೂರು ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ನಗರದ ಬಿ.ಡಿ.ರಸ್ತೆ, ಡಿ.ಸಿ ಆಫೀಸ್ ಸುತ್ತಮುತ್ತ, ಬಸವೇಶ್ವರ ಟಾಕೀಸ್ ಸುತ್ತಮುತ್ತ, ಆಕಾಶವಾಣಿ ಸುತ್ತಮುತ್ತ, ವಾಸವಿ ಲ್ಯಾಬ್ ಸುತ್ತಮುತ್ತ, ಚಿಕ್ಕಪೇಟೆ, ದೊಡ್ಡಪೇಟೆ, ಲಕ್ಷ್ಮೀ ಬಜಾರ್, ಬಿ.ಎಲ್, ಗೌಡ ಲೇಔಟ್, ಆರ್.ಟಿ.ಓ ಕಚೇರಿ ಸುತ್ತಮುತ್ತ, ತುರುವನೂರು ರಸ್ತೆ, ಧರ್ಮಶಾಲಾ ರಸ್ತೆ, ತಿಪ್ಪಜ್ಜಿ ಸರ್ಕಲ್, ಎಸ್ಬಿಎಂ ಬ್ಯಾಂಕ್, ಗಾಂಧಿ ಸರ್ಕಲ್, ಕೆಳಗೋಟೆ ಮುನ್ಸಿಪಲ್ ಕಾಲೋನಿ, ಖಾಜಿಂ ಮೊಹಲ್ಲಾ ಪೊಲೀಸ್ ಬಾರ್ ಲೈನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯವಾಹಕ ಇಂಜಿನಿಯರ್ ತಿಳಿಸಿದ್ದಾರೆ.
[t4b-ticker]
+ There are no comments
Add yours