ವರದಿ: ಎಸ್.ವೇದಮೂರ್ತಿ
೧೯ಹೆಚ್.ಎಲ್.ಕೆ.೨
ಹೊಳಲ್ಕೆರೆ : ತಾಲೂಕು ಬಿಜೆ ಹಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಎಸ್.ಡಿ.ಎಂ.ಸಿ ಸದಸ್ಯರಿಗೆ ಕರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಸರಕಾರ ಸರಕಾರಿ ಶಾಲೆಯಲ್ಲಿನ ಕುಂದು ಕೊರತೆಗಳನ್ನು ಪರಿಶೀಲಿಸಿ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ಉದ್ಧೇಶದಿಂದ ಶಾಲಾ ಆಭಿವೃದ್ಧಿ ಸಮಿತಿಗಳನ್ನು ನಿಯೋಜನೆ ಮಾಡಲಾಗಿದೆ. ಹಾಗಾಗಿ ಶಾಲಾ ಅಭಿವೃದ್ಧಿ ಸಮಿತಿಗೆ ಬಿಜೆಹಳ್ಳಿಯಲ್ಲಿರುವ ಪ್ರಾಥಮಿಕ ಶಾಲೆಯ ಆವರಣದಲ್ಲಿ ತರಬೇತಿ ಕರ್ಯಗಾರವನ್ನು ಆಯೋಜನೆ ಮಾಡಲಾಗಿತ್ತು. ಕರ್ಯಗಾರವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುಳಾ ಮರಳಸಿದ್ದಪ್ಪ ಉದ್ಘಾಟಿಸಿದರು. ಸದಸ್ಯರಾದ ಚಂದ್ರಪ್ಪ, ಪ್ರೇಮಾಲೋಹಿತ್, ಸುಶೀಲಮ್ಮ,ಮುಖ್ಯ ಶಿಕ್ಷಕ ಶಿವಕುಮಾರ್ ಕರ್ಯ ಕುರಿತು ಮಾತನಾಡಿದರು. ಎಸ್.ಡಿ.ಎಂ.ಆಧ್ಯಕ್ಷರು, ಸದಸ್ಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಇದೆ ಸಮಯದಲ್ಲಿ ಗ್ರಾಮ ಶೈಕ್ಷಣಿಕ ಆಭಿವೃದ್ಧಿ ಚಿಂತನ ಮಂತನ ನಡೆಸಲಾಗಿತ್ತು.
+ There are no comments
Add yours