ಬಡ ಜನರ ಭರವಸೆಯ ಕೇಂದ್ರವಾಗಿರುವ ಸುರಕ್ಷಾ ಪಾಲಿಕ್ಲಿನಿಕ್ ಗೆ ದಶಮಾನೋತ್ಸವ ಸಂಭ್ರಮ

 

 

 

 

ಚಳ್ಳಕೆರೆ-26 ನಗರದ ಹಲವಾರು ಬಡ ಜನರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಮೂಲಕ ಬಡ ಜನರ ಭರವಸೆಯ ಕೇಂದ್ರವಾಗಿರುವ ಸುರಕ್ಷಾ ಪಾಲಿಕ್ಲಿನಿಕ್ ಗೆ ದಶಮಾನೋತ್ಸವ ಸಂಭ್ರಮ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದು ನೇತಾಜಿ ಸ್ನೇಹ ಬಳಗದ ಸದಸ್ಯ ಚೇತನ್ ಕುಮಾರ್ ಹೇಳಿದರು.

 

 

ಅವರು ನಗರದ ವೆಂಕಟೇಶ್ವರ ನಗರ ವ್ಯಾಪ್ತಿಯ ಬೆಳಕು ಕಿವುಡ-ಮೂಗರ ಶಾಲೆಯಲ್ಲಿ ಸುರಕ್ಷಾ ಪಾಲಿಕ್ಲಿನಿಕ್ ನ ದಶಮಾನೋತ್ಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಣ್ಣು, ಬಿಸ್ಕತ್, ಮೊಟ್ಟೆ‌ ವಿತರಿಸಿ ಮಾತನಾಡಿದರು. ನಗರದಲ್ಲಿ 2012ರಲ್ಲಿ ಪ್ರಾರಂಭವಾದ ಸುರಕ್ಷಾ ಪಾಲಿಕ್ಲಿನಿಕ್ ಹಲವಾರು ಜನಸೇವೆ ಮಡುವ ಮೂಲಕ ಜನರ ಸೇವೆ ಮಾಡುತ್ತಿದೆ. ರಾಜ್ಯ ಹಲವಾರು ನುರಿತ ತಜ್ಞರನ್ನು ಕರೆಸಿ ವಿಶೇಷ ತಪಾಸಣೆ ಕಾರ್ಯಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸುರಕ್ಷಾ ಪಾಲಿಕ್ಲಿನಿಕ್ ಮಾಲೀಕ ಬಿ.ಫರೀದ್ ಖಾನ್(ಭಾಷ), ನೇತಾಜಿ ಪ್ರಸನ್ನ, ಆರ್.ಪ್ರಸನ್ನಕುಮಾರ್, ಮುತ್ತುರಾಜ್ ಮೊದಲಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours