ಚಿತ್ರದುರ್ಗ, ಮಾರ್ಚ್ 10:
ಚಿತ್ರದುರ್ಗ ನಗರ ಉಪವಿಭಾಗದ ಘಟಕ-1ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಚಾಲನೆಯಲ್ಲಿರುವ ಕಾರಣ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಸ್ಥಳಾಂತರಿಸಲು ಮಾರ್ಚ್ 12 ಮತ್ತು 13ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಜೆಸಿಆರ್ 1ನೇ ಕ್ರಾಸ್ನಿಂದ 7ನೇ ಕ್ರಾಸ್ ವರೆಗೆ, ವಿ.ಪಿ.ಬಡಾವಣೆ, ಬಡಾಮಕಾನ್ ಸುತ್ತಮುತ್ತ, ಆಜಾದ್ ನಗರ, ಹೊರಪೇಟೆ, ಗೋಪಾಲಪುರ ರಸ್ತೆ ಸುತ್ತಮುತ್ತ, ಪ್ರಸನ್ನ ಟಾಕೀಸ್ ಸುತ್ತಮುತ್ತ, ರಾಮ್ದಾಸ್ ಕಾಂಪೌಂಡ್ ಸುತ್ತಮುತ್ತ, ಹಿಮ್ಮತ್ ನಗರ ಸುತ್ತಮುತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಹೆಚ್. ತಿಮ್ಮಣ್ಣ ತಿಳಿಸಿದ್ದಾರೆ.
[t4b-ticker]
+ There are no comments
Add yours