ಮೊಳಕಾಲ್ಮುರು: ತಾಲೂಕಿನ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ನಾಳೆ ಡಿಎಂಎಫ್ ಟಿ ಅನುದಾನದಲ್ಲಿ ನಾಳೆ 100 ವಿಕಲಚೇತನರಿಗೆ ಬೆಳಗ್ಗೆ 11 ಗಂಟೆಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ ಮತ್ತು ಕೋವಿಡ್ ವಾರಿಯರ್ಸ್ಗೆ ಸನ್ಮಾನ ಮಾಡಲಿದ್ದಾರೆ.
ಸಚಿವರ ಆಶಯದಂತೆ ಹಿಂದುಳಿದ ಕ್ಷೇತ್ರದಲ್ಲಿ ವಿಕಲಚೇತನರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡುವುದಕ್ಕೆ ದೃಢ ನಿರ್ಧಾರದ ಹಿಂದೆ ಕಾಳಜಿ ಇದೆ. ಹೌದು ಎಲ್ಲಾ ಸಾಮಾನ್ಯ ಜನರಂತೆ ವಿಕಲಚೇತನರು ಬದುಕಬೇಕು.ಎಲ್ಲಾರಂತೆ ಬೇರೆ ಸ್ಥಳಗಳಿಗೆ ತೆರಳಲು ಪರರ ಮೇಲೆ ಅವಲಂಬನೆ ಆಗದೆ ಜೀವನ ರೂಪಿಸಿಕೊಳ್ಳಲಿ ಎಂಬ ದೃಷ್ಟಿಯಿಂದ ಇಂತಹ ಮಹತ್ವದ ನಿರ್ಧಾರ ಇದನ್ನು ಎಲ್ಲಾವಿಕಲಚೇತನರು ಸದ್ಬಳಕೆ ಮಾಡಿಕೊಳ್ಳಬೇಕು.
ಮೊಳಕಾಲ್ಮುರು ಕ್ಷೇತ್ರದಲ್ಲಿ ಎಲ್ಲಾ ಕೆಲಸ ಕಾರ್ಯಗಳು ಅನುದಾನದ ಕೊರತೆಯಿಲ್ಲದೆ ನಡೆಯುತ್ತಿದ್ದು ಐತಿಹಾಸಿಕ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಮೊಳಕಾಲ್ಮುರು ಇತಿಹಾಸದಲ್ಲಿ ಮೊದಲಾಗಿದೆ ಎಂದರೆ ತಪ್ಪಗಲಾರದು.
[t4b-ticker]
+ There are no comments
Add yours