ಚಳ್ಳಕೆರೆ-02 ತಾಲ್ಲೂಕಿನ ನನ್ನಿವಾಳಗ್ರಾಮದಲ್ಲಿ ಗುರುವಾರ ರಾತ್ರಿ9ಕ್ಕೆ ಕುರುಕ್ಷೇತ್ರ ನಾಟಕ ನಡೆಯುವುದು ಎಂದು ಕಲಾವಿದ
ಬೆಂಗಳೂರಿನ ಉದ್ಯಮಿ, ಹಿರಿಯ ಕಲಾವಿದ ನಟಿಸುವ ಶಕುನಿ ಪಾತ್ರಧಾರಿ ಎಂ.ನಾಗರಾಜು ತಿಳಿಸಿದರು.
ಅವರು ಮಹಿತಿ ನೀಡಿ, ನಗರದ ವ್ಯಾಪ್ತಿಯಲ್ಲಿ ಈವರೆಗೂ ಸುಮಾರು 6 ಭಾರಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿರುವ ಮಾರುತಿ ಕೃಪ ಪೋಷಿತ ನಾಟಕ ಈ ಭಾಗದ ಎಲ್ಲರ ಮನಗೆದ್ದ ನಾಟಕಗಳಲ್ಲಿ ಒಂದು. ಕಾಟಪ್ಪನಹಟ್ಟಿಯ ನಾಟಕ ಮಂಡಳಿ ಎಂದರೆ ಜಿಲ್ಲೆಯಲ್ಲೇ ಹೆಸರು ಮಾಡಿದ ಮಂಡಳಿಗಳಲ್ಲಿ ಒಂದು. ಅಭಿಮನ್ಯು, ಅರ್ಜುನ, ಭೀಮಸೇನ, ರ್ಧಮರಾಯ, ಕೃಷ್ಣ, ದುರ್ಯೋಧನ,ಕರ್ಣ, ದುಶ್ಯಸನ, ವಿಧುರ ಪಾತ್ರಧಾರಿಗಳು ಪಾತ್ರಕ್ಕೆ ಜೀವ ತುಂಬ ಅದ್ಬುತ ನಟನೆಯನ್ನು ಮೈಗೂಡಿಸಿಕೊಂಡವರು. ಕುರುಕ್ಷೇತ್ರ ನಡೆದ ಹಲವಾರು ಸಂಗತಿಗಳು ನಾಟಕದ ರೂಪದಲ್ಲಿ ಒಂದೊಂದು ಸನ್ನಿವೇಶಕ್ಕೂ ತಮ್ಮದೇಯಾದ ದಾಟಿಯಲ್ಲಿ ನಟನೆ ಮಾಡುವ ಕಲಾವಿದರ ಕಲೆಗೆ ಬೆಲೆಕಟ್ಟಲಾಗದು ಎಂದರೆ ತಪ್ಪಿಲ್ಲ.
+ There are no comments
Add yours