ಚಳ್ಳಕೆರೆ : ತಾಲ್ಲೂಕಿನ ನಾಯಕನಹಟ್ಟಿ ರಸ್ತೆಯ ಪಕ್ಕ ಶಂಕರ ನಗರದ ತಾಂಡದ ಬಳಿ ಇರುವ ದಾಸರ ಬೈಯಣ್ಣನ ಸ್ವಾಮಿ ದೇವರ (ದಾಸರ ಬೈಯಣ್ಞನ ದೇವರ ಗುಡ್ಡೆಯ )ಹುಂಡಿ ಒಡೆದು ಕದೀಮರು ಹಣ ದೋಚಿರುವುದು ಶುಕ್ರವಾರ ಬೆಳಿಕಿಗೆ ಬಂದಿದೆ.
ನಾಯಕನಹಟ್ಟಿ ರಸ್ತೆಯ ಸಮೀಪದ ಶಂಕರ ನಗರದ ತಾಂಡದ ಬಳಿ ಹೊಲದಲ್ಲಿರುವ ಶ್ರೀ ದಾಸರ ಬೈಯಣ್ಣನ ಸ್ವಾಮಿ ಗುಡ್ಡೆಯ ದೇವರ ಹುಂಡಿ ಒಡೆದು ಹುಂಡಿ ಹೊಡೆದು ಹಣ ದೋಚಿದ್ದಾರೆ.
ಹುಂಡಿಯಲ್ಲಿದ್ದ ನೋಟುಗಳನ್ನು ಮಾತ್ರ ತೆಗೆದುಕೊಂಡು, ಚಿಲ್ಲರೆ ಅಲ್ಲೆ ಬಿಟ್ಟು ಕದೀಮರು ಪರಾರಿಯಾಗಿದ್ದಾರೆ. ದೇವರ ಹುಂಡಿಯನ್ನು ಸುಮಾರು ಮೂರು ವರ್ಷಗಳಿಂದ ಒಡೆದಿರಲಿಲ್ಲವಂತೆ, ಈಗ ಹುಂಡಿಯನ್ನು ಕದೀಮರ ಕದ್ದು ಪರಾರಿಯಾಗಿದ್ದಾರೆ.
ಹುಂಡಿ ಒಡೆದು ಕಳತನ ಮಾಡಿರುವುದು ಶುಕ್ರವಾರ ಬೆಳಿಕಿಗೆ ಬಂದಿದ್ದು, ಭಕ್ತಾದಿಗಳು ಶುಕ್ರವಾರ ಎಂದಿನಂತೆ ಶ್ರೀದಾಸರ ಬೈಯಣ್ಣ ಸ್ವಾಮಿ ಗುಡ್ಡೆಗೆ ಪೂಜೆ ಸಲ್ಲಿಸಲು ಶಂಕರ ನಗರದ ತಾಂಡದ ಆಶೋಕ, ಪುಟ್ಟರಾಜು, ಕಿರಣ್ ಅವರು ಹೋದಾಗ ದೇವರ ಹುಂಡಿ ಕಳವಾಗಿರುವುದು ಕಂಡು ಬಂದಿದೆ..
ಈ ಹಿಂದೆಯು ದೇವರ ಹುಂಡಿಯನ್ನು ಕದೀಮರು ದೋಚಿದ್ದರಂತೆ….
ಈ ಘಟನೆ ಚಳ್ಳಕೆರೆ ಪೊಲೋಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..
[t4b-ticker]
+ There are no comments
Add yours