ಹಿರಿಯೂರು,: ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾ ಯಿ ಅವರು ಜೂನ್ 4 ಕ್ಕೆ ಧರ್ಮಪುರ ಕೆರೆಗೆ ನೀರು ಹರಿಸುವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸಿದ್ದತೆಗಳ ಕುರಿತು ಮುಖಂಡರ ಜೊತೆಯಲ್ಲಿ ಚರ್ಚೆ ನಡೆಸಿದರು. ವಿಶೇಷ ಅಂದರೆ ಆ ಸ್ಥಳಕ್ಕೆ ಕಾರ್ಯಕರ್ತರ ಜೊತೆಯಲ್ಲಿ ಸ್ಕೂಟಿಯಲ್ಲಿ ತೆರಳಿ ಪರಿಶೀಲನೆ ನಡಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಹೊಸಹಳ್ಳಿ ಚೆಕ್ ಡ್ಯಾಂ ನಿಂದ ಗೂಳ್ಯ, ಹೊಸಹಳ್ಳಿ, ಸೂಗೂರು, ಮುಂಗುಸುವಳ್ಳಿ, ಹರಿಯಬ್ಬೆ, ಧರ್ಮಪುರ ವರೆಗೆ ಅಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಜೊತೆಯಲ್ಲಿ ಇದ್ದರು.
[t4b-ticker]
+ There are no comments
Add yours