ಕಾಂಗ್ರೆಸ್ ಪಕ್ಷದಲ್ಲಿರುವ ನನ್ನ ಶಿಷ್ಯಂದಿರು ಬಿಜೆಪಿಗೆ ಮತ ಹಾಕತ್ತಾರೆ ಅಂತ ಹೇಳಿದ್ದು ಯಾರು, ನವೀನ್ ಗೆ ಮತ್ತಷ್ಟು ಬಲ

 

 

 

 

ವರದಿ; ಮಹಂತೇಶ್ ಮೊಳಕಾಲ್ಮುರು

ಮೊಳಕಾಲ್ಮುರು:ಚಿತ್ರದುರ್ಗ:ವಿಧಾನಪರಿಷತ್ತು ಚುನಾವಣೆಯಲ್ಲೂ ಆಪರೇಷನ್ ಕಮಲ ನಡೆಯುತ್ತಿದ್ಯಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ….

ಹೌದು ಚಿತ್ರದುರ್ಗ ದಾವಣಗೆರೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು ಹಾಲಿ ಶಾಸಕರು ಸಚಿವರು ಸಂಸದರ ಹಾದಿಯಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ಉಭಯ ಪಕ್ಷಗಳ ನಾಯಕರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತಂತ್ರ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ….

ಅಲ್ಲದೇ ಈ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಚಾಣದ ಸದ್ದು ಕೂಡ ಹೆಚ್ಚಾಗಿ ಕೇಳಿಬರುತ್ತಿದೆ…

ಚುನಾವಣೆಗೆ ಇನ್ನೇನು ಒಂದು ದಿನ ಬಾಕಿ ಇರುವಾಗಲೇ ಕಮಲ ಪಾಳಯದಿಂದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿ ಸದ್ಯಸ್ಯರನ್ನು ತನ್ನ ತೆಕ್ಕೆಗೆ ಸೆಳೆಯುವಲ್ಲಿ ತೆರೆಮರೆಯಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದೂ ಸ್ಪಷ್ಟವಾಗುತ್ತಿದೆ….

 

 

ಬುಧವಾರ ರಾತ್ರಿ ಎಂದು ರಾಂಪುರ ಗ್ರಾಮದಲ್ಲಿರುವ ಎನ್ ವೈ ಗೋಪಾಲಕೃಷ್ಣ ರವರ ಮನೆಯಲ್ಲಿ ಬಿಜೆಪಿ ಮುಖಂಡರೊಂದಿಗೆ ನಡೆದ ವಿಧಾನಪರಿಷತ್ ಚುನಾವಣೆ ಕುರಿತಾದ ಚರ್ಚೆಯು ಆಪರೇಶನ್ ಕಮಲದ ಅನುಮಾನ ಹುಟ್ಟಿಸಿದೆ…

ಪ್ರಸ್ತುತ ಕೂಡ್ಲಿಗಿ ಶಾಸಕರಾಗಿರುವ ಎನ್ ವೈ ಗೋಪಾಲಕೃಷ್ಣ ರವರಿಗೆ ಮೊಳಕಾಲ್ಮೂರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ದ ಸಖ್ಯ ಹೊಂದಿರುವ ಸ್ನೇಹಿತರೆ ಹೆಚ್ಚು ಇರುವುದರಿಂದ ಶಾಸಕರ ರಾಜಕೀಯ ಪಡಸಾಲೆಯಲ್ಲಿ ಪಳಗಿದವರು ಇಂದೂ ಚುನಾಯಿತ ಪ್ರತಿನಿಧಿಗಳಾಗಿ ನಾನಾ ಹುದ್ದೆಗಳಲ್ಲಿ ಅಲಂಕರಿಸಿದ್ದಾರೆ..

ಹೀಗಿರುವಾಗ ಅವರ ನಂಟು ಬೆಸೆದಿರುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳಿಗೆ ಶಾಸಕ ಗೋಪಾಲಕೃಷ್ಣರವರು ಗಾಳ ಹಾಕಿದ್ದಾರೆ…

ಈ ಬಗ್ಗೆ ಸ್ವತಃ ಅವರೇ ತುಟಿಬಿಚ್ಚಿದ್ದು ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಸದಸ್ಯರಾಗಿರುವ ಹಲವರು ನನ್ನ ಮಾತು ಕೇಳುತ್ತಾರೆ ಅವರು ನನ್ನ ಶಿಷ್ಯಂದಿರು ಆದ್ದರಿಂದಾಗಿ ನಾನು ಹೇಳಿದ್ದೇನೆ ವೋಟ್ ಮಾಡುತ್ತಾರೆ ಎಂದು ಹೇಳುತ್ತಾರೆ…

ಈ ವಿಡಿಯೋ ಸಂಭಾಷಣೆಯೂ ನೋಡಿದರೆ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣರವರು ತನ್ನ ಬಹುತೇಕ ಶಿಷ್ಯರನ್ನು ಸೆಳೆದಿರುವಲ್ಲಿ ಆಶ್ಚರ್ಯವೇನಿಲ್ಲ…

[t4b-ticker]

You May Also Like

More From Author

+ There are no comments

Add yours