ಚಿತ್ರದುರ್ಗ: ರಾಜ್ಯಾದ್ಯಂತ ಅಂಬೇಡ್ಕರ್ ಜಯಂತಿ ಆಚರಣೆಗೆ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ.ಎಲ್ಲಾ ಪಕ್ಷದ ನಾಯಕರುಗಳು ಬ್ಯಾನರ್ ಗಳ ಮೂಲಕ ಅಂಬೇಡ್ಕರ್ ಫೋಟೋ ಹಾಕಿ ಜಯಂತಿಗೆ ಶುಭ ಹಾರೈಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರ್ ನಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರ ಫೋಟೋ ಗಳು ಚಿತ್ರದುರ್ಗ ನಗರದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿ ಮುಂದೆ ಕಟ್ಟಲಾಗಿದೆ. ಅಂಬೇಡ್ಕರ್ ಫೋಟೋ ಇಲ್ಲದೆ ಅಂಬೇಡ್ಕರ್ ಗೆ ಅವಮಾನ ಮಾಡಲಾಗಿದೆ , ಎಂದು ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಗೆ ಯಾವತ್ತು ಗೌರವ ಕೊಡುವುದಿಲ್ಲ ಎಂದು ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ. ಅಂಬೇಡ್ಕರ್ ಫೋಟೋ ಹಾಕಿಸಲು ಬ್ಯಾನರ್ ನಲ್ಲಿ ಜಾಗ ಇರಲಿಲ್ಲ ಎಂದು ಲೇವಡಿ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
[t4b-ticker]
+ There are no comments
Add yours