ಚಳ್ಳಕೆರೆ: ಎರಡು ಬೈಕ್ ಗಳ ನಡುವೆ ಡಿಕ್ಕಿ ಯಾಗಿ ಅಪಘಾತ ಸಂಭವಿಸಿದ್ದು ಬೈಕ್ ಅಪಘಾತದಲ್ಲಿ ಮೂರು ಮಕ್ಕಳು ಸೇರಿದಂತೆ ಇಬ್ಬರು ಸವಾರರಿಗೆ ಗಂಭೀರ ಗಾಯಗಳಾಗಿವೆ.
ತಾಲೂಕಿನ ದೊಡ್ಡ ಉಳ್ಳಾರ್ತಿ ಸಮೀಪ ಘಟನೆ ನಡೆದಿದ್ದು ಘಟನೆಯಲ್ಲಿ ಕಾಲುವೆ ಹಳ್ಳಿಯ ಗೌಡ್ರ ಹಟ್ಟಿಯ ಇಬ್ಬರು ಬಾಲಕರು ಒಬ್ಬ ಬಾಲಕಿ ಹಾಗೂ ಬೈಕ್ ಸವಾರನಿಗೆ ತೀವ್ರ ರೀತಿಯ ಗಾಯಗಳಾಗಿತ್ತು. ಗಾಯಾಳು ರಸ್ತೆಯಲ್ಲಿ ಬಿದ್ದು ಸಾಕಷ್ಟು ಗಾಯಗೊಂಡಿದ್ದು ಆಸ್ಪತ್ರೆ ಹೋಗಲು ಪರದಾಡುತ್ತಿದ್ದನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಕಂಡು ತಹಶೀಲ್ದಾರ್ ಎನ್.ರಘುಮೂರ್ತಿ ಈ ಘಟನೆ ಕಂಡು ತಕ್ಷಣವೇ ತಮ್ಮ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಹಶೀಲ್ದಾರ್ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
[t4b-ticker]
+ There are no comments
Add yours